Advertisement

ಜಿಲ್ಲಾ ಮರಾಠಿ ಸೇವಾ ಸಂಘದ ಮಾಸಿಕ ಸಭೆ

12:05 AM May 07, 2019 | Sriram |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಮಂಗಳೂರು ಘಟಕದ ಮಾಸಿಕ ಸಭೆ ರವಿವಾರ ಲೇಡಿಹಿಲ್‌ ಬಳಿಯ ಹಿಲ್‌ಸೈಡ್‌ ಅಪಾರ್ಟ್‌ಮೆಂಟ್‌ನಲ್ಲಿ ನಡೆಯಿತು.

Advertisement

ಮಂಗಳೂರು ಘಟಕದ ಅಧ್ಯಕ್ಷೆ ವೀಣಾಲತಾ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುನ್ನಡೆಗೆ ಪ್ರತಿಯೊಬ್ಬರು ತನ್ನಿಂದಾದ ಸಹಾಯ ನೀಡಬೇಕು. ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಆತ್ಮ ಸಂತೋಷದ ಜತೆಗೆ ಸಂಘದ ಮುನ್ನಡೆಗೆ ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಸಂಘದ ಸಂಚಾಲಕ ಶ್ರೀಧರ ನಾಯ್ಕ ಸಂಘದ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದರು. ತಾಲೂಕು ಘಟಕದ ಉಪಾಧ್ಯಕ್ಷ ಕುಶಾಲಪ್ಪ ನಾಯ್ಕ, ಕಾನೂನು ಸಲಹೆಗಾರ್ತಿ ಗಾಯತ್ರಿ, ಪ್ರಚಾರ ಸಮಿತಿಯ ಹರೀಶ್‌ ಮೋಟುಕಾನ, ಜತೆ ಕಾರ್ಯದರ್ಶಿ ಚಿತ್ರಲತಾ ಉಪಸ್ಥಿತರಿದ್ದರು.ಶಿಕ್ಷಣ ಕಾರ್ಯದರ್ಶಿ ಚಂದ್ರಾವತಿ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್‌ ನಾಯ್ಕ ವರದಿ ವಾಚಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಅಕ್ಷತಾ ಜಯರಾಜ್‌ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next