Advertisement

ಈ ರಾಜ್ಯದ ಎಲ್ಲ ನಿರುದ್ಯೋಗಿ ಯುವಕರಿಗೆ ಮುಂದಿನ ವಿತ್ತೀಯ ವರ್ಷದಿಂದ ಮಾಸಿಕ ಭತ್ಯೆ

08:56 PM Jan 26, 2023 | Team Udayavani |

ಜಗ್ಧಾಲಪುರ: ಛತ್ತೀಸಗಢ ರಾಜ್ಯ ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಇಂತಹ ಹೊತ್ತಿನಲ್ಲಿ ಅಲ್ಲಿನ ಕಾಂಗ್ರೆಸ್‌ ಸರ್ಕಾರ ದೊಡ್ಡ ಕ್ರಮವೊಂದನ್ನು ಘೋಷಿಸಿದೆ.

Advertisement

ಗಣರಾಜ್ಯೋತ್ಸವ ದಿನಾಚರಣೆಯಂದು ಬಸ್ತಾರ್‌ ಜಿಲ್ಲೆಯ ಜಗ್ಧಾಲಪುರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಮುಂದಿನ ವಿತ್ತೀಯ ವರ್ಷದಿಂದ ಎಲ್ಲ ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.

2018ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಅತಿಮುಖ್ಯ ಭರವಸೆಗಳಲ್ಲಿ ಇದೂ ಒಂದು. ಅದನ್ನು ಈಗ ಅಧಿಕಾರ ಮುಕ್ತಾಯವಾಗುವ ಹಂತದಲ್ಲಿ ಆ ಪಕ್ಷ ಜಾರಿ ಮಾಡುವುದಾಗಿ ಘೋಷಿಸಿದೆ! ಅಷ್ಟು ಮಾತ್ರವಲ್ಲ, ರಾಜ್ಯ ಸರ್ಕಾರದಿಂದಲೇ ನಿರ್ಮಿಸಲ್ಪಟ್ಟಿರುವ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ತೆರಿಗೆ ವಿನಾಯ್ತಿ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಐಬಿಎಂ-ಸ್ಯಾಪ್‌ನಿಂದಲೂ ಉದ್ಯೋಗ ಕಡಿತ: ಕಂಗಾಲಾದ ಉದ್ಯೋಗಿಗಳು

Advertisement

Udayavani is now on Telegram. Click here to join our channel and stay updated with the latest news.

Next