Advertisement

ಶಾಲಾ ಮಕ್ಕಳಿಗೂ ಮಾಸಿಕ ಹಣ: ಪರಮೇಶ್ವರ್‌

11:25 PM Feb 04, 2023 | Team Udayavani |

ತುಮಕೂರು: ಒಂದರಿಂದ 5ನೇ ತರಗತಿಯ ಮಕ್ಕಳಿಗೆ 150 ರೂ. ಮತ್ತು 6ರಿಂದ 10ನೇ ತರಗತಿಯಲ್ಲಿನ ಮಕ್ಕಳಿಗೆ ಪ್ರತಿ ತಿಂಗಳು 300 ರೂ.ಗಳನ್ನು ನೀಡುವ ಬಗ್ಗೆ ಆಲೋಚನೆಯಿದೆ ಎಂದು ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ, ಮಾಜಿ ಡಿಸಿಎಂ ಡಾ| ಜಿ.ಪರಮೇಶ್ವರ್‌ ತಿಳಿಸಿದರು.

Advertisement

ಪ್ರತಿ ಬಡ ಕುಟುಂಬದ ಮಹಿಳೆಗೆ 2000 ರೂ.ಗಳನ್ನು ನೀಡಲು ಪ್ರಣಾಳಿಕೆಯಲ್ಲಿ ಸೇರಿಸಲು ಒಪ್ಪಿದ್ದು, ಇದಕ್ಕೆ ವರ್ಷಕ್ಕೆ 24 ಸಾವಿರ ಕೋಟಿ ರೂ. ಬೇಕು. ಇದನ್ನು ಭರಿಸುವ ಮೂಲದ ಬಗ್ಗೆಯೂ ಚರ್ಚೆಯಾಗಿದೆ ಎಂದರು.
ನಾನು ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು.

ಪ್ರತಿ ದಿನ ಪ್ರಣಾಳಿಕೆ ರಚನೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಶುಕ್ರವಾರವೂ ರಾಜ್ಯ ಉಸ್ತುವಾರಿ ಸುರ್ಜೆàವಾಲಾ ಜತೆಗೆ ಹಲವಾರು ಗಂಟೆಗಳ ಕಾಲ ಚರ್ಚೆ ನಡೆಯಿತು. ಪ್ರಣಾಳಿಕೆಯನ್ನು ಆಯಾ ಜಿಲ್ಲೆಗಳ ಸಮಸ್ಯೆಗಳನ್ನು ಗಮನಿಸಿ ತಯಾರಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಮತ್ತು ಮಂಗಳೂರಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಲಾ ಗಿದೆ. ಅವುಗಳನ್ನು ಬಗೆಹರಿಸಲೂ ಚರ್ಚಿಸಲಾಗಿದೆ. ಆಯಾ ಜಿಲ್ಲೆಯ 10 ವಿಷಯಗಳನ್ನು ಇಟ್ಟುಕೊಂಡು ಪ್ರಣಾಳಿಕೆ ರಚನೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next