Advertisement

Monsoon Rain : ದಕ್ಷಿಣ ಕನ್ನಡದಲ್ಲಿ ಬಿಡುವು ನೀಡಿದ ಮಳೆ

01:16 AM Jul 29, 2024 | Team Udayavani |

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಮಳೆ ಬಿಡುವು ನೀಡಿದ್ದು, ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಜಿಲ್ಲೆಯ ಕೆಲವು ಕಡೆಗಳಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿದೆ.

Advertisement

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮಳೆ ತುಸು ಬಿಡುವು ನೀಡುವ ನಿರೀಕ್ಷೆ ಇದೆ. ಜು.29ರಂದು ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಬಳಿಕ ಸದ್ಯಕ್ಕೆ ಯಾವುದೇ ಅಲರ್ಟ್‌ ಇಲ್ಲ. ಮಂಗಳೂರಿನಲ್ಲಿ 29.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ ಡಿ.ಸೆ. ಏರಿಕೆ ಮತ್ತು 26 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 3 ಡಿ.ಸೆ. ಏರಿಕೆ ಕಂಡಿತ್ತು.

ಉಡುಪಿ ಜಿಲ್ಲೆಯಲ್ಲಿ ಮಳೆ ಇಳಿಮುಖ
ಉಡುಪಿ ಜಿಲ್ಲೆಯಲ್ಲಿ ರವಿವಾರ ಹಲವೆಡೆ ಸಾಧಾರಣ ಮಳೆಯಾಗಿದೆ. ಕುಂದಾಪುರ, ಉಡುಪಿ, ಕಾರ್ಕಳ, ಹೆಬ್ರಿ ಸುತ್ತಮುತ್ತ ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಲಘು ಮಳೆಯಾಗಿದೆ. ಶನಿವಾರ ತಡರಾತ್ರಿ ಕೆಲವು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ರವಿವಾರ ಮುಂಜಾನೆ ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಅಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಗಾಳಿಯಿಂದ ಕಾಪು, ಉಡುಪಿ, ಕುಂದಾಪುರ ಭಾಗದಲ್ಲಿ 22 ಮನೆಗಳಿಗೆ ಹಾನಿ ಸಂಭವಿಸಿದೆ.

ಮಳೆ ಬಿಡುವು: ಮಲ್ಪೆ ಬೀಚ್‌, ಸೀವಾಕ್‌ನಲ್ಲಿ ಜನಸಂದಣಿ

ಮಲ್ಪೆ: ಒಂದೆಡೆ ಮಳೆ ಬಿಡುವು, ಇನ್ನೊಂದಡೆ ವಾರಾಂತ್ಯದ ಹಿನ್ನೆಲೆಯಲ್ಲಿ ಮಲ್ಪೆ ಕಡಲತೀರ ಹಾಗೂ ಸೀವಾಕ್‌ನಲ್ಲಿ ರವಿವಾರ ಸಂಜೆ ಜನ ಸಂದಣಿ ಕಂಡು ಬಂದಿದೆ. ಕಡಲಿಗಿಳಿಯದಂತೆ ತಡೆಬೇಲಿ ಹಾಕಿದ್ದರಿಂದ ಜನರು ಮರಳಿನಲ್ಲಿ ಕುಳಿತು ಸಮುದ್ರದ ಸೌಂದರ್ಯವನ್ನು ಆಸ್ವಾದಿಸಿದರು. ಎರಡು ವಾರಗಳಿಂದ ಮಳೆಯ ವಾತಾವರಣ ಇದ್ದ ಕಾರಣ ಜನರಿಗೆ ಬೀಚ್‌ನಲ್ಲಿ ವಿಹಾರ ಸಾಧ್ಯವಾಗಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next