Advertisement

ಕಾರ್ಕಳ: ರಸ್ತೆ ಬದಿ ಅರೆಪ್ರಜ್ಞಾ ಸ್ಥಿತಿಯಲ್ಲಿ ಮಂಗಗಳು ಪತ್ತೆ! 6 ಮಂಗಗಳು ಸಾವು, 6 ಚೇತರಿಕೆ

04:45 PM Oct 21, 2020 | sudhir |

ಕಾರ್ಕಳ:  ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬಾರಾಡಿ ಕಂಬಳ ರಸ್ತೆ ಬದಿ ಅಪರಿಚಿತರು ವಾಹನದಲ್ಲಿ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಮಂಗಗಳನ್ನು  ಎಸೆದು ಹೋದ ಘಟನೆ ಮಂಗಳವಾರ ರಾತ್ರಿ ನಡೆದಿದೆ, ಘಟನೆಯಲ್ಲಿ ಒಟ್ಟು 12 ಮಂಗಗಳು ಅರೆಪ್ರಜ್ಞೆ ಸ್ಥಿತಿಯಲ್ಲಿ ಪತ್ತೆಯಾಗಿವೆ.

Advertisement

ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಮಂಗಗಳಿಗೆ ಮಂಗಳೂರು ವನ್ಯಜೀವಿ ವಿಭಾಗದ ವೈದ್ಯರು ಬುಧವಾರ ಚಿಕಿತ್ಸೆ ನೀಡಿದ್ದು ಅವುಗಳಲ್ಲಿ 6 ಮಂಗಗಳು ಸಾವಿಗೀಡಾಗಿದ್ದು ಉಳಿದ 6 ಮಂಗಗಳು ಚೇತರಿಕೆ ಕಂಡಿವೆ ಎನ್ನಲಾಗಿದೆ.

ಚಿಕಿತ್ಸೆಯಿಂದ ಬದುಕುಳಿದ ಮಂಗಗಳನ್ನು ಮರಳಿ ಕಾಡಿಗೆ ಬಿಡಲಾಗಿದೆ. ಸತ್ತ ಮಂಗಗಳನ್ಮು ಮೂಡಬಿದಿರೆ ಅರಣ್ಯ ಇಲಾಖೆ ಅಧಿಕಾರಿಗಳು ನಿಯಮ ಪ್ರಕಾರ ದಹಿಸಿ ಧಪನಗೊಳಿಸಿದ್ದಾರೆ.

ಕ್ರಷಿ ಉಪಟಳಕ್ಕೆ ನೊಂದು ಮಂಗಗಳಿಗೆ ವಿಷ ಇಕ್ಕಿ ರಸ್ತೆ ಬದಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:ಯತ್ನಾಳ್ ಅವರ ಅನಿಸಿಕೆ ಬಿಜೆಪಿಯ ಅನಿಸಿಕೆಯಲ್ಲ: ಸಿಎಂ ಬದಲಾವಣೆಯಿಲ್ಲ: ಎಚ್.ವಿಶ್ವನಾಥ್

Advertisement
Advertisement

Udayavani is now on Telegram. Click here to join our channel and stay updated with the latest news.

Next