Advertisement
ಮಂಗನ ಕಾಯಿಲೆ ಬಗ್ಗೆ ಭಯ ಪಡಬೇಕಾದ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ಕ್ರಮ ವಹಿಸಬೇಕು. ಸೋಂಕಿತ ಮಂಗನ ಶರೀರದಿಂದ ಹರಡುವ ಉಣ್ಣಿಗಳಿಂದ ಕಾಡಿಗೆ ತೆರಳುವ ಜನರಿಗೆ ಹರಡುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ನಿಗದಿತ ಅರಣ್ಯದ ಗಡಿ ಭಾಗಗಳಲ್ಲಿನ ಜನರಿಗಾಗಿ ಮೈಗೆ ಹಚ್ಚಿಕೊಳ್ಳಲು 300 ಬಾಟಲಿ ಡಿಎಂಪಿ ತೈಲ ವಿತರಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಮಾತನಾಡಿ, ಸತ್ತ ಮಂಗ ಕಂಡುಬಂದರೆ ಸುಟ್ಟು ಹಾಕದೆ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸಾಕುಪ್ರಾಣಿಗಳಲ್ಲಿ ಉಣ್ಣಿಗಳು ಕಂಡು ಬಂದರೆ ತಪಾಸಣೆಗೊಳಪಡಿಸಬೇಕು ಎಂದರು. ಜಿಲ್ಲೆಯಲ್ಲಿ ಈವರೆಗೆ 9 ಮಂಗಗಳು ಸಾವನ್ನಪ್ಪಿವೆ. ಆದರೆ ಮಂಗನಕಾಯಿಲೆಯಿಂದ ಎನ್ನಲು ಸಾಧ್ಯವಿಲ್ಲ. ಪುತ್ತೂರಿನ ಕಡಬ ಕುಂಟಾಡಿ, ಬೆಳ್ತಂಗಡಿಯ ಪಡಂಗಡಿ ಕಣ್ಣಾಜೆ, ಉಜಿರೆಯ ಅತ್ತಾಜೆಯಿಂದ ಉಣ್ಣಿಗಳ ಮಾದರಿ ತಪಾಸಣೆಗೆ ಕಳುಹಿಸಲಾಗಿದೆ. ಕೊೖಲ, ಕಾಣಿಯೂರಿನಿಂದಲೂ ಸಂಗ್ರಹಿಸಲಾಗಿದೆ ಎಂದರು.