Advertisement

ಶಂಕಿತ ಮಂಗನ ಕಾಯಿಲೆಗೆ ಬಲಿ  

01:15 AM Apr 01, 2019 | Team Udayavani |

ಸಾಗರ: ಮಾರಣಾಂತಿಕ ಮಂಗನಕಾಯಿಲೆ ಮತ್ತೂಂದು ಬಲಿ ಪಡೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯ ಜೇಗಳ ಗ್ರಾಮದ ಕೃಷಿಕ ಎಸ್‌.ಆರ್‌. ಸಿದ್ದಾರ್ಥ ಗೌಡ (78) ಭಾನುವಾರ ಬೆಳಗ್ಗೆ ಶಂಕಿತ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಸಿದ್ದಾರ್ಥ ಗೌಡ ಅವರನ್ನು ಮಾ.11ರಂದು ಮಣಿಪಾಲದ ಕೆಎಂಸಿಗೆ ದಾಖಲಿ ಸಲಾಗಿತ್ತು. ಕಾಯಿಲೆ ಉಲ್ಬಣಗೊಂಡಿದ್ದರಿಂದ ಕಳೆದ ಐದು ದಿನಗಳಿಂದ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಭಾನುವಾರ ಬೆಳಗಿನ ಜಾವ 5 ಗಂಟೆಗೆ ಅವರು ಮೃತಪಟ್ಟಿದ್ದಾರೆ.

Advertisement

ಈ ನಡುವೆ, ಮಣಿಪಾಲ್‌ನಲ್ಲಿ ಒಟ್ಟು 33 ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಣುಗುಗಳಲ್ಲಿನ ಕೆಎಫ್‌ಡಿ ವೈರಸ್‌ ಜೂನ್‌ 15ರವರೆಗೆ ಜಾಗೃತ ಸ್ಥಿತಿಯಲ್ಲಿಯೇ ಇರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳವರೆಗೂ ಪರಿಸ್ಥಿತಿ ಯನ್ನು ಗಂಭೀರವಾಗಿಯೇ ಪರಿಗಣಿಸಬೇಕಾ ಗುತ್ತದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next