Advertisement

Dandeli: ರಕ್ಷಣೆಗಾಗಿ ದ್ವಿಚಕ್ರ ವಾಹನದಲ್ಲಿ ಅವಿತಿದ್ದ ಮುಂಗುಸಿ ರಕ್ಷಿಸಿದ ಉರಗ ಪ್ರೇಮಿ

03:24 PM Dec 16, 2023 | Team Udayavani |

ದಾಂಡೇಲಿ: ಬಿಡಾಡಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡು ರಕ್ಷಣೆಗಾಗಿ ರಸ್ತೆ ಬದಿ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನದೊಳಗಡೆ ಅವಿತು ಕೂತಿದ್ದ ಮುಂಗುಸಿಯೊಂದನ್ನು ಉರಗ ಪ್ರೇಮಿ ರಕ್ಷಣೆ ಮಾಡಿದ ಘಟನೆ ಡಿ. 16ರ ಶನಿವಾರ ನಡೆದಿದೆ.

Advertisement

ಬಿಡಾಡಿ ನಾಯಿಗಳ ದಾಳಿಗೊಳಗಾಗಿ ಗಾಯಗೊಂಡು ಓಡಿ ಬಂದ ಮುಂಗುಸಿ ನಗರದ ಜೆ.ಎನ್.ರಸ್ತೆಯ ಶಾ ಬಿಲ್ಡಿಂಗ್ ಮುಂಭಾಗದಲ್ಲಿಟ್ಟಿದ್ದ ದ್ವಿಚಕ್ರ ವಾಹನದೊಳಗಡೆ ಅವಿತು ಕೂತಿತ್ತು.

ಗಾಯಗೊಂಡು ಜೀವ ರಕ್ಷಣೆಗಾಗಿ ದ್ವಿಚಕ್ರ ವಾಹನದೊಳಗಡೆ ಮುಂಗುಸಿ ಅವಿತು ಕೂತಿರುವುದನ್ನು ಗಮನಿಸಿದ ಪತ್ರಿಕಾ ವಿತರಕ ರಿಯಾಜ್ ನವಲಗುಂದ ಮುಂಗುಸಿಯನ್ನು ರಕ್ಷಣೆ ಮಾಡಬೇಕಾದ ನಿಟ್ಟಿನಲ್ಲಿ ಉರಗ ಪ್ರೇಮಿ ರಜಾಕ್ ಶಾ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡರು.

ತಕ್ಷಣವೇ ಸ್ಥಳಕ್ಕೆ ಬಂದ ಉರಗ ಪ್ರೇಮಿ ರಜಾಕ್ ಶಾ ಸುರಕ್ಷಿತವಾಗಿ ಮುಂಗುಸಿಯನ್ನು ದ್ವಿಚಕ್ರ ವಾಹನದಿಂದ ಹೊರತೆಗೆದರು. ಗಂಭೀರ ಗಾಯಗೊಂಡಿದ್ದ ಅದನ್ನು ಪಶುವೈದ್ಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ, ನಂತರ ಅರಣ್ಯ ಇಲಾಖೆಯ ಪಶು ಆಸ್ಪತ್ರೆಗೆ ಹಸ್ತಾಂತರಿಸಿದರು.

ಒಟ್ಟಿನಲ್ಲಿ ರಿಯಾಜ್ ನವಲಗುಂದ ಅವರ ಸಮಯೋಚಿತ ನಿರ್ಧಾರ ಮತ್ತು ರಜಾಕ್ ಶಾ ಅವರ ತಡವರಿಯದ ಸ್ಪಂದನೆಯಿಂದ ಮುಂಗುಸಿಯೊಂದು ಬದುಕುಳಿಯುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next