Advertisement

ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮನಿ ಆರ್ಡರ್‌ ಚಳವಳಿ

06:34 AM May 20, 2020 | Suhan S |

ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಮದ್ಯ ನಿಷೇಧ ಕುರಿತು ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯಿಂದ ಮನಿ ಆರ್ಡರ್‌ ಚಳವಳಿ ನಡೆಯಿತು.

Advertisement

ಗ್ರಾಮೀಣ ಕಾರ್ಮಿಕ ಸಂಘಟನೆ ಮಹಿಳಾ ಸದಸ್ಯರುಗಳು ಮುಖ್ಯಮಂತ್ರಿ ಹೆಸರಿಗೆ ಮನಿ ಆರ್ಡರ್‌ ಕಳುಹಿಸಿಕೊಟ್ಟು ಸರ್ಕಾರಕ್ಕೆ ಹಣದ ಕೊರತೆ ಇದ್ದಲ್ಲಿ ನಮ್ಮ ಬೆವರಿನ ಹಣ ಕೊಡಲು ನಾವು ಸಿದ್ಧರಿದ್ದೇವೆ. ಆದರೆ ಮದ್ಯದ ಹಣದಿಂದ ರಾಜ್ಯ ನಡೆಸಲು ತಾವು ಮುಂದಾಗದಿರಿ. ಇಂಥ ದುಸ್ಥಿತಿ ರಾಜ್ಯಕ್ಕೆ ಬರಬಾರದು. ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಿ ಮಹಿಳೆಯರು ಮಕ್ಕಳು ರಾಜ್ಯದ ಜನತೆ ಘನತೆಯಿಂದ ಜೀವಿಸಲು ಆವಕಾಶ ನೀಡಿ ಎಂದು ಮಹಿಳೆಯರು ಮನವಿ ಮಾಡಿದ್ದಾರೆ.

ಸಂಘಟನೆ ಸಂಚಾಲಕ ಶಬ್ಬೀರ್‌ ಭಾಷಾ, ಉಚ್ಚಂಗೆಮ್ಮ ಚಮನ್‌, ಕೆಂಚಮ್ಮ, ರತ್ನಮ್ಮ, ನೀಲಮ್ಮ, ಪ್ರೇಮವ್ವ, ಪಕ್ಕೀರವ್ವ ರವಿ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next