Advertisement

ಹಣ ದುರ್ಬಳಕೆ: ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಕೆ

02:46 PM May 06, 2022 | Team Udayavani |

ರಾಯಚೂರು: ಅರಣ್ಯ ಇಲಾಖೆ ಅಧಿಕಾರಿಗಳು ನಗರದಲ್ಲಿ ಗಿಡಗಳನ್ನು ನೆಡದಿದ್ದರೂ ನೆಟ್ಟಿರುವುದಾಗಿ ಹೇಳಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ದೂರು ಸಲ್ಲಿಸಿತು.

Advertisement

ನಗರದ ವ್ಯಾಪ್ತಿಯಲ್ಲಿ ಸಸಿಗಳನ್ನು ಹಾಕಿ ನಿರ್ವಹಿಸಲು ಟೆಂಡರ್‌ ಕರೆದಿದ್ದು, ಯಾವುದೇ ಏಜೆನ್ಸಿ ಪಾಲ್ಗೊಳ್ಳದ ಕಾರಣ ಅರಣ್ಯ ಇಲಾಖೆಯು ಕಾಮಗಾರಿ ನಿರ್ವಹಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಆದರೆ, ಮಾಹಿತಿ ಹಕ್ಕು ನಿಯಮದಡಿ ಮಾಹಿತಿ ಕೋರಿದಾಗ ಅರಣ್ಯ ಇಲಾಖೆಯಿಂದ ಯಾವುದೇ ಸಸಿಗಳನ್ನು ನೆಟ್ಟಿರುವುದಿಲ್ಲ. ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದರು.

ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ತಾಯರಾಜ, ಎಸ್‌. ನರಸಿಂಹಲು, ತಿಮ್ಮಪ್ಪ, ದೇವೇಂದ್ರ, ಮಂಜುನಾಥ, ಬಾಬು, ಜಗನ್ನಾಥ, ರಾಜ್‌ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next