Advertisement

ಪುರಾತನ ಕೃಷಿಗೆ ಭಾಗವತ್‌ ಕರೆ : ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿಕೆ

09:35 PM Jun 20, 2022 | Team Udayavani |

ನಾಗ್ಪುರ: ಭಾರತದ ಜಿಡಿಪಿ ಅಭಿವೃದ್ಧಿ ಕಾಣಬೇಕೆಂದರೆ ನಾವು ಭಾರತ ಕೇಂದ್ರಿಯ ಕೃಷಿಗೆ ಆದ್ಯತೆ ನೀಡಬೇಕು. ಹೀಗೆಂದು ಹೇಳಿರುವುದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌.

Advertisement

ನಾಗ್ಪುರದಲ್ಲಿ ನವದೆಹಲಿ ಮತ್ತು ಮಹಾರಾಷ್ಟ್ರ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಪಶುವಿಜ್ಞಾನದ ರಾಷ್ಟ್ರೀಯ ಅಕಾಡೆಮಿಯ ಘಟಿಕೋತ್ಸವ ಮತ್ತು ವೈಜ್ಞಾನಿಕ ಸಮಾವೇಶದಲ್ಲಿ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ. “ಕ್ರಿ.ಶ.1700ರವರೆಗೆ ಭಾರತವು ವಿಶ್ವದ ಆರ್ಥಿಕತೆಯಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ ಆ ಮಟ್ಟಕ್ಕೆ ತಲುಪಬೇಕೆಂದರೆ ನಾವು ನಮ್ಮ ಪರಂಪರಾಗತವಾಗಿ ಬಂದಿರುವ ಕೃಷಿ ವಿಧಾನಗಳನ್ನು ಅನುಸರಿಸಬೇಕು. ಅವೈಜ್ಞಾನಿಕವೆಂದು ಸ್ಥಳೀಯ ವಿಧಾನವನ್ನು ತೆಗೆದುಹಾಕಬಾರದು. ನಮ್ಮ ದೇಶದ ಕೃಷಿ ವಿಧಾನಗಳು ಮತ್ತು ಪಶುಸಂಗೋಪನೆ ವಿಧಾನವು ಅತ್ಯಂತ ಪ್ರಾಚೀನವಾದದ್ದು. ಅದರಲ್ಲಿ ಅಡ್ಡ ಪರಿಣಾಮಗಳಿಲ್ಲ. ಆದರೆ ಆಧುನಿಕ ವಿಜ್ಞಾನದಲ್ಲಿ ಅಡ್ಡ ಪರಿಣಾಮಗಳಿವೆ’ ಎಂದು ಅವರು ಹೇಳಿದರು.

ಹಾಗೆಯೇ “ನಮ್ಮ ದೇಶದ ಶೇ.65 ರೈತರು ಸಣ್ಣ ಪ್ರಮಾಣದ ರೈತರು. ಅವರಿಗೆ ಯಾಂತ್ರಿಕತೆ ಫ‌ಲಕಾರಿಯಲ್ಲ. ಹಾಗಾಗಿಯೇ ರೈತರು ಹೆಚ್ಚಾಗಿ ಆತ್ಮಹತ್ಯೆ ಸುಳಿಗೆ ಸಿಲುಕುತ್ತಿದ್ದಾರೆ. ಅದನ್ನು ತಪ್ಪಿಸಲು ಸುಸ್ಥಿರ ಕೃಷಿ ವಿಧಾನಗಳನ್ನು ನಾವು ಅವರಿಗೆ ಹೇಳಿಕೊಡಬೇಕಿದೆ’ ಎಂದೂ ಭಾಗವತ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಯುಯುಸಿಎಂಎಸ್‌ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಪ್ರವೇಶ  ಪ್ರಕ್ರಿಯೆ

Advertisement

Udayavani is now on Telegram. Click here to join our channel and stay updated with the latest news.

Next