Advertisement

ಮೋದಿ ಮೊದಲು ಅವರ ಪಕ್ಷದ ಹಿರಿಯರನ್ನು ಗೌರವಿಸಲಿ

06:40 AM May 03, 2018 | Team Udayavani |

ಕಲಬುರಗಿ: “ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ದೇವೇಗೌಡರು ಹಿರಿಯರು ಎಂಬ ಕಾರಣಕ್ಕೆ ಗೌರವದಿಂದ ಮಾತನಾಡಿರಬಹುದು ಎನ್ನುವುದಾದರೆ ಅವರದ್ದೇ ಪಕ್ಷದಲ್ಲಿನ ಹಿರಿಯ ನಾಯಕರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಲಿ’ ಎಂದು ಕಾಂಗ್ರೆಸ್‌ ಸಂಸದಿಯ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸತ್‌ಹಾಲ್‌ನಲ್ಲಿ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ನಮಸ್ಕಾರ ಹೇಳಿದರೆ ಪ್ರತಿ ನಮಸ್ಕಾರ ಹೇಳುವ ಸೌಜನ್ಯವನ್ನೂ ತೋರದ ಪ್ರಧಾನಿ, ಚುನಾವಣೆಗೋಸ್ಕರ ಈ ರೀತಿ ಮಾಡುವ ಗಿಮಿಕ್‌ ಬಹಳ ದಿನ ನಡೆಯೋದಿಲ್ಲ ಎಂದರು. ಕಾಂಗ್ರೆಸ್‌ಗೆ ಬೀಜದ ಗುಣವಿದೆ. ಭೂಮಿಯಲ್ಲಿ ಎಷ್ಟೇ ಹೂತರೂ ಮೇಲೆ ಹೇಗೆ ಏಳುತ್ತದೆಯೋ ಅದೇ ರೀತಿ ಕಾಂಗ್ರೆಸ್‌ ಪಕ್ಷಏಳುತ್ತಲೇ ಇರುತ್ತದೆ. ಕರ್ನಾಟಕದ ಜನ  ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಗುಲಾಮರಾಗಲು ಇಷ್ಟ ಪಡುವುದಿಲ್ಲ. ಗುಜರಾತ್‌ ಜನ ಮೋದಿಗೆ ಯಾವ ರೀತಿ ಪೆಟ್ಟು ಕೊಟ್ಟಿದ್ದಾರೆ ಎನ್ನುವುದು ಅರಿವಿಗೆ ಬಂದಂತಿಲ್ಲ. ಪ್ರಧಾನಿಯವರು ಹೋದ ಕಡೆಯೆಲ್ಲ ನೆಹರು ಕುಟುಂಬವನ್ನು ಕೀಳಾಗಿ ಟೀಕಿಸುತ್ತಾರೆ. ಆದರೆ, ಹಿಂದಿನ ಸರ್ಕಾರದ ಆರ್ಥಿಕ ನೀತಿ ಹೇಗಿತ್ತು, ತಮ್ಮದು ಹೇಗಿದೆ ಎಂಬುದಾಗಿ ಹೊಂದಾಣಿಕೆಯೇ ಮಾಡಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.

ಮೋದಿ ಅವರು ಸಂವಿಧಾನದ ಆಧಾರದ ಮೇಲೆ ಪ್ರಧಾನಿ ಆಗಿದ್ದೇನೆ ಎನ್ನುತ್ತಾರೆ. ಆದರೆ ಅವರದ್ದೇಸಂಪುಟದ ಸದಸ್ಯ ಅನಂತಕುಮಾರ ಹೆಗಡೆ  ಸಂವಿಧಾನ ಬದಲಾಗಬೇಕು ಎನ್ನುತ್ತಾರೆ. ಮಂತ್ರಿಯನ್ನು ಸಂಪುಟದಿಂದ ಕಿತ್ತೂಗೆಯಲಿಕ್ಕಾಗುತ್ತಿಲ್ಲ ಎಂದಾದ ಮೇಲೆ ಪರೋಕ್ಷವಾಗಿ ಬೆಂಬಲ ಇದೆ ಎಂಬುದನ್ನು ನಿರೂಪಿಸುತ್ತದೆ. ಈ ರೀತಿ ಎರಡು ನೀತಿ ಹೊಂದುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next