Advertisement

ಮೋದಿ ವರ್ಚಸ್ವಿ ನಾಯಕ : ಹಾಡಿ ಹೊಗಳಿದ ರಜನಿಕಾಂತ್‌

10:01 AM May 29, 2019 | Vishnu Das |

ಚೆನ್ನೈ: ಜವಹಾರ್‌ ಲಾಲ್‌ ನೆಹರು, ರಾಜೀವ್‌ ಗಾಂಧಿ ಬಳಿಕ ನರೇಂದ್ರ ಮೋದಿ ಭಾರತದ ಓರ್ವ ವರ್ಚಸ್ವಿ ನಾಯಕ ಎಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಪ್ರಧಾನಿಯನ್ನುಹಾಡಿ ಹೊಗಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್‌, ಬಿಜೆಪಿ ನೇತೃತ್ವದ ಎನ್‌ಡಿಎಯ ಭರ್ಜರಿ ಗೆಲುವು ನಿಜವಾಗಿಯೂ ನರೇಂದ್ರ ಮೋದಿ ಅವರ ಗೆಲುವು ಎಂದರು.

ನಾನು ಮೇ 30 ರಂದು ಪ್ರಧಾನಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಡ. ಅವರಿಗೆ ಸಾಧ್ಯ ಎನ್ನುವುದನ್ನು ತೋರಿಸಿಕೊಡಬೇಕು. ಯುವಕನಾಗಿರುವ ಹಿನ್ನಲೆಯಲ್ಲಿ ಅವರಿಗೆಪಕ್ಷ ನಿಭಾಯಿಸುವುದು ಕಷ್ಟವಾಗಿರಬಹುದು. ಪ್ರಜಾಪ್ರಭುತ್ವದಲ್ಲಿ ವಿಪಕ್ಷವೂ ಪ್ರಬಲವಾಗಿರಬೇಕು ಎಂದರು.

2017 ರಲ್ಲಿ ರಜನಿಕಾಂತ್‌ ಅವರು ರಾಜಕೀಯ ಪ್ರವೇಶದ ಕುರಿತಾಗಿ ಘೋಷಿಸಿದ್ದರು. ಆದರೆ ಪ್ರಸಕ್ತ ಲೋಕಸಭಾ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಲು ಉತ್ಸಾಹ ತೋರಿರಲಿಲ್ಲ. ಯಾವೊಬ್ಬ ಅಭ್ಯರ್ಥಿಯು ತನ್ನ ಭಾವಚಿತ್ರ ಬಳಸಿಕೊಳ್ಳಬಾರದಂತೆ ಮನವಿ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next