Advertisement

ಮೋದಿಯೂ ವರ್ಚಸ್ವಿ ನಾಯಕ

11:34 AM May 29, 2019 | sudhir |

ಜವಾಹರಲಾಲ್‌ ನೆಹರೂ, ರಾಜೀವ್‌ ಗಾಂಧಿಯವರಂತೆಯೇ ಪ್ರಧಾನಿ ಮೋದಿ ಅವರೂ ವರ್ಚಸ್ಸಿರುವ ನಾಯಕ ಎಂದು ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿಪ್ರಾಯಪಟ್ಟಿದ್ದಾರೆ. ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲು ಮೋದಿಯವರ ನಾಯಕತ್ವವೇ ಕಾರಣ ಎಂದೂ ಹೇಳಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರ ನಾಯಕತ್ವದಲ್ಲಿ ಯಾವುದೇ ಕೊರತೆಯಿಲ್ಲ. ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಅವರೊಬ್ಬ ಯುವ ನಾಯಕ. ಬಹುಶಃ ಅವರಿಗೆ ಪಕ್ಷದ ಹಿರಿಯ ನಾಯಕರಿಂದ ಸಹಕಾರ ಸಿಗಲಿಲ್ಲ ಎಂದು ಅನಿಸುತ್ತದೆ ಎಂದಿದ್ದಾರೆ ತಲೈವಾ.
ಗುರುವಾರ ನಡೆಯಲಿರುವ ಪ್ರಧಾನಿ ಮೋದಿ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿಯೂ ರಜನಿಕಾಂತ್‌ ತಿಳಿಸಿದ್ದಾರೆ. ಭಾರತದ ರಾಜಕೀಯದಲ್ಲಿ ಒಬ್ಬ ನಾಯಕನ ಜನಪ್ರಿಯತೆ ಆಧಾರದಲ್ಲೇ ರಾಜ್ಯ ಮಟ್ಟದಲ್ಲಿ ಅಥವಾ ರಾಷ್ಟ್ರ ಮಟ್ಟದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದ್ದಿದೆ. ಮೋದಿ ಅಂಥ ಒಬ್ಬ ನಾಯಕ. ಆದರೆ, ತಮಿಳುನಾಡು- ಕೇರಳದಲ್ಲಿ ಮೋದಿ ಅಲೆ ಇರಲಿಲ್ಲ. ತ.ನಾಡಿನಲ್ಲಿ ಸ್ಟೆರ್‌ಲೈಟ್‌ ವಿವಾದ, ಕಾವೇರಿ ಮುಖಜ ಭೂಮಿಯಲ್ಲಿ ಮೀಥೇನ್‌ ಹೊರತೆಗೆಯುವ ಯೋಜನೆಗಳೆಲ್ಲವೂ ಮೋದಿ-ವಿರೋಧಿ ಅಲೆಯನ್ನು ಹುಟ್ಟುಹಾಕಿದವು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next