Advertisement

Modi ಕೀ ಗ್ಯಾರಂಟಿ ದೇಶ, ವಿದೇಶದಲ್ಲೂ ಕೆಲಸ: ಸಚಿವ ಜೈಶಂಕರ್‌

01:37 AM Apr 07, 2024 | Team Udayavani |

ಹೊಸದಿಲ್ಲಿ: ಲಾವೋಸ್‌ನಲ್ಲಿ ಅಸುರಕ್ಷಿತ ಮತ್ತು ಕಾನೂನುಬಾಹಿರ ಕೆಲಸಗಳಲ್ಲಿ ಸಿಲುಕಿದ್ದ 17 ಮಂದಿ ಭಾರತೀಯ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶನಿವಾರ ತಿಳಿಸಿದ್ದಾರೆ. “ದೇಶ ಮತ್ತು ವಿದೇಶದಲ್ಲಿ ಕೂಡ “ಮೋದಿ ಕೀ ಗ್ಯಾರಂಟಿ’ ಕೆಲಸ ಮಾಡುತ್ತದೆ. ಆಮಿಷಕ್ಕೆ ಒಳಗಾಗಿ ಲಾವೋಸ್‌ನಲ್ಲಿ ಅಸುರಕ್ಷಿತ ಮತ್ತು ಕಾನೂನುಬಾಹಿರ ಕೆಲಸಗಳಲ್ಲಿ ಸಿಲುಕಿದ್ದ 17 ಮಂದಿ ಭಾರತೀಯ ಕಾರ್ಮಿಕರು ಸುರಕ್ಷಿತವಾಗಿ ದೇಶಕ್ಕೆ ವಾಪಸಾಗುತ್ತಿದ್ದಾರೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Advertisement

ಭಾರತೀಯ ಕಾರ್ಮಿಕರು ಸುರಕ್ಷಿತವಾಗಿ ದೇಶಕ್ಕೆ ಹಿಂದಿರುಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಲಾವೋಸ್‌ನ ಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next