Advertisement

ಕರಾವಳಿಯಲ್ಲಿ ಸಾಧಾರಣ ಮಳೆ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

01:26 AM Jul 14, 2022 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿಯಾದ್ಯಂತ ಬುಧವಾರ ಮಳೆಯ ಪ್ರಮಾಣ ಬಹಳಷ್ಟು ಕಡಿಮೆಯಾಗಿತ್ತು. ಕೆಲವು ಕಡೆಗಳಲ್ಲಿ ಬಿಸಿಲಿನ ನಡುವೆ ಆಗಾಗ ಮಳೆಯಾಗಿದೆ.

Advertisement

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ
ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಸಂಟ್ಯಾರು ಸೇತುವೆ ಬಳಿ ಬುಧವಾರ ಮಧ್ಯಾಹ್ನ ಉಪ್ಪಿನಂಗಡಿ ಆತೂರು ನಿವಾಸಿ ಆಸಿಫ್‌ ಅವರು ಚಲಾಯಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಕಾರು ಭಾಗಶಃ ಜಖಂಗೊಂಡಿದೆ. ಒಂದೂವರೆ ವರ್ಷದ ಮಗು ಸಹಿತ ಐವರು ಪ್ರಯಾಣಿಕರಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಕಡಲ್ಕೊರೆತ ತಡೆಗೆಮರಳು ಚೀಲ ಅಳವಡಿಕೆ
ಬೈಕಂಪಾಡಿ: ಮೂರು ವಾರಗಳಿಂದ ಸುರಿದ ಭಾರೀ ಮಳೆಗೆ ಬೈಕಂಪಾಡಿ ಮೀನಕಳಿಯದಲ್ಲಿ ಕಡ ಲ್ಕೊರೆತ ಸಂಭವಿಸಿದ ಸ್ಥಳದಲ್ಲಿ ಮನೆಗಳ ಸುರಕ್ಷೆ ದೃಷ್ಟಿಯಿಂದ ಜಂಬೋ ಚೀಲ ದಲ್ಲಿ ಮರಳು ತುಂಬಿಸಿ ಇಡುವ ಕಾಮಗಾರಿಯನ್ನು ಸ್ಥಳೀಯರ ನೆರವಿ ನಲ್ಲಿ ಮಾಡಲಾಯಿತು.

10ಕ್ಕೂ ಅಧಿಕ
ಮನೆಗಳು ಅಪಾಯದಲ್ಲಿದ್ದು, ಶಾಸಕ ಡಾ| ಭರತ್‌ ಶೆಟ್ಟಿ ವೈ. ಸೂಚನೆ ಮೇರೆಗೆ ಎಂಆರ್‌ಪಿಎಲ್‌ ಜಂಬೋ ಚೀಲಗಳನ್ನು ಒದಗಿಸಿದೆ. ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next