Advertisement

ಮೊಬೈಲ್‌ ಕದ್ದ ಆರೋಪ: ಬಾಲಕಿ ಆತ್ಮಹತ್ಯೆ

10:50 PM Sep 11, 2019 | Team Udayavani |

ಶಹಾಪುರ: ವಿದ್ಯಾರ್ಥಿನಿಯರ ವಸತಿ ಗೃಹದಲ್ಲಿ ಮೊಬೈಲ್‌ ಕದ್ದ ಆರೋಪದಿಂದ ಮನನೊಂದ 9ನೇ ತರಗತಿ ವಿದ್ಯಾರ್ಥಿನಿ, ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆ. ಲಕ್ಷ್ಮೀ ಮಲ್ಲಣ್ಣ (14) ಮೃತ ವಿದ್ಯಾರ್ಥಿನಿ. ಶಹಾಪುರ ತಾಲೂಕಿನ ಅರಳಳ್ಳಿ ಗ್ರಾಮದ ಈ ಬಾಲಕಿ, ಕಲಬುರಗಿ ಎನ್‌.ವಿ. ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾನಗರದ ಬಾಲಕಿಯರ ಹಾಸ್ಟೆಲ್‌ನಲ್ಲಿದ್ದಳು. ಸೆ.7ರಂದು ನಿಲಯದಲ್ಲಿ ಅಡುಗೆ ಸಹಾಯಕಿ ಯೊಬ್ಬರ ಮೊಬೈಲ್‌ ಕಳವಾಗಿದೆ ಎಂದು ನಿಲಯದ ಎಲ್ಲಾ ವಿದ್ಯಾರ್ಥಿನಿಯರ ಪೆಟ್ಟಿಗೆ ಪರಿಶೀಲಿಸಲಾಗಿತ್ತು.

Advertisement

ಆಗ ಯಾರ ಪೆಟ್ಟಿಗೆಯಲ್ಲೂ ಮೊಬೈಲ್‌ ಪತ್ತೆಯಾಗಲಿಲ್ಲ. ಆದರೂ, ಹಾಸ್ಟೆಲ್‌ನ ಅಡುಗೆ ಸಹಾಯಕರು ಲಕ್ಷ್ಮೀ ಮೇಲೆ ಆರೋಪ ಮಾಡಿದ್ದರು. ಇದರಿಂದ ಆಕೆ ಮನನೊಂದಿದ್ದಳು. ಮೊಹರಂ ರಜೆಗೆ ಮನೆಗೆ ತೆರಳಿದ್ದ ಲಕ್ಷ್ಮೀ, ರಜೆ ಮುಗಿದಿದ್ದರಿಂದ ಪೋಷಕರು ಮತ್ತೆ ಹಾಸ್ಟೆಲ್‌ಗೆ ಬಿಟ್ಟು ಬರುತ್ತಾರೆ ಎಂದು ಹೆದರಿ, ಮಂಗಳವಾರ ರಾತ್ರಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮೃತ ವಿದ್ಯಾರ್ಥಿನಿ ತಂದೆ ಮಲ್ಲಣ್ಣ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next