Advertisement

ಚರಂಡಿ ವಿಚಾರಕ್ಕೆ ಜಗಳ: ಮನೆಗೆ ನುಗ್ಗಿದ ಗುಂಪಿನಿಂದ ಯುವಕನ ಕೊಲೆ

01:37 PM Jun 13, 2022 | Team Udayavani |

ಕಲಬುರಗಿ: ಚರಂಡಿ ವಿಷಯದಲ್ಲಿ ಆರಂಭಗೊಂಡ ಕ್ಷುಲಕ ಜಗಳವೊಂದು ಯುವಕನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ‌ ಮುಡಬೂಳ ಗ್ರಾಮದಲ್ಲಿ ನಡೆದಿದೆ.

Advertisement

ಕೊಲೆಯಾದ ಯುವಕನನ್ನು ವಿಶ್ವನಾಥ ಸಂಗಾವಿ (32 ವ) ಎಂದು ಗುರುತಿಸಲಾಗಿದೆ.

ಮನೆಯ ಮುಂದಿನ ಚರಂಡಿ ವಿಚಾರಕ್ಕೆ ಭಾನುವಾರ ಮಧ್ಯಾಹ್ನ ವಿಶ್ವನಾಥ ಹಾಗೂ ಇತರರ ಮಧ್ಯೆ ಜಗಳವಾಗಿತ್ತು. ರಾತ್ರಿ ಪುನಃ ಈ ವಿಚಾರವಾಗಿ ಜಗಳ ಶುರುವಾಗಿದೆ. ಗುಂಪೊಂದು ವಿಶ್ವನಾಥ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ.

ಈ ವೇಳೆ ವಿಶ್ವನಾಥ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ವೇಳೆ ಗುಂಪು ಮನೆಯನ್ನು ಕೂಡ ಧ್ವಂಸ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಕೊಳ್ಳೇಗಾಲ: ಕಾರಿನಲ್ಲಿ ಅಕ್ರಮವಾಗಿ ಆನೆದಂತ ಸಾಗಾಟ; ನಾಲ್ವರ ಬಂಧನ,ಕಾರು ವಶಕ್ಕೆ

Advertisement

ಈ ವೇಳೆಯಲ್ಲಿ ಸಂಗಾವಿ ಕುಟುಂಬದ ಆರು ಜನರಿಗೂ ಗಾಯವಾಗಿವೆ. ಗಾಯಾಳುಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಲ್ಲೆ ಮಾಡಿದವರು ಪರಾರಿಯಾಗಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next