Advertisement

ಜೂ.5ರಂದು ಕೈಗೊಳ್ಳಬೇಕಿದ್ದ ಅಯೋಧ್ಯೆ ಪ್ರವಾಸ ಮುಂದೂಡಿದ ರಾಜ್‌ ಠಾಕ್ರೆ

08:47 PM May 20, 2022 | Team Udayavani |

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್‌ಎಸ್‌)ದ ಮುಖ್ಯಸ್ಥರಾಗಿರುವ ರಾಜ್‌ ಠಾಕ್ರೆ ಅವರು ಜೂ.5ರಂದು ಕೈಗೊಳ್ಳಬೇಕಿದ್ದ ಅಯೋಧ್ಯೆ ಪ್ರವಾಸವನ್ನು ಮುಂದೂಡಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ.

Advertisement

ರಾಜ್‌ ಅಯೋಧ್ಯೆ ಪ್ರವಾಸವನ್ನು ಖಂಡಿಸಿ, ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಪ್ರವಾಸ ಮುಂದೂಡಲಾಗಿದೆ.

ಈ ಬಗ್ಗೆ ರಾಜ್‌ ಟ್ವೀಟ್‌ ಮಾಡಿದ್ದು, ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೇ 22ರಂದು ಪುಣೆಯಲ್ಲಿ ನಡೆಯಲಿರುವ ಎಂಎನ್‌ಎಸ್‌ ರ್‍ಯಾಲಿಯಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠೆ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

2008ರಲ್ಲಿ ಉತ್ತರ ಭಾರತದ ಜನರಿಗೆ ಅವಮಾನ ಮಾಡಿದ್ದರು ಎನ್ನುವ ಆರೋಪದ ಹಿನ್ನೆಲೆ ರಾಜ್‌ ಅವರು ಜನರಿಗೆ ಬಹಿರಂಗ ಕ್ಷಮೆ ಯಾಚಿಸುವವರೆಗೆ ಅಯೋಧ್ಯೆಗೆ ಬರುವಂತಿಲ್ಲ ಎಂದು ಬಿಜೆಪಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next