Advertisement

ಬಿಜೆಪಿ ಮಾಡಿದ ಅಭಿವೃದ್ಧಿ ನೋಡಿ ಮತ ಹಾಕಿ: ಶೋಭಾ ನಾಯ್ಕ

03:49 PM Dec 06, 2021 | Team Udayavani |

ಶಿರಸಿ: ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರು ಅಲ್ಪ‌ ಮತದಿಂದ ಕಳೆದ ಅವಧಿಯಲ್ಲಿ ಸೋತವರು. ಈಗ ಬೆಂಬಲ ಕೊಟ್ಟು ಗೆಲ್ಲಿಸಬೇಕು ಎಂದು ಬಿಜೆಪಿ‌ ಮಹಿಳಾ ಅಧ್ಯಕ್ಷೆ ಶೋಭಾ ನಾಯ್ಕ ಹೇಳಿದರು.

Advertisement

ಸೋಮವಾರ ಅವರು ಜಿಲ್ಲಾ‌ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ‌ ಸುದ್ದಿಗೋಷ್ಟಿ  ನಡೆಸಿ ಮಾತನಾಡಿದರು.

ಗ್ರಾಮ ಪಂಚಾಯತ್ ಸದಸ್ಯರ ‌ಮನೆ ಮನೆಗೆ ತೆರಳಿ ಅವರ‌ಮನ ಮುಟ್ಟುವ ಕಾರ್ಯ ಮಾಡಿದ್ದೇವೆ. ಗ್ಯಾಸ್ ಸೇರಿದಂತೆ ಅನೇಕ‌ ನೆರವಿನ ಕಾರ್ಯ ಕೇಂದ್ರ ಸರಕಾರ ಮಾಡಿದೆ.

ಬೆಲೆ ಏರಿಕೆ, ಗ್ಯಾಸ್ ಏರಿಕೆ ಯಾರೂ‌ ಈ ಪ್ರಸ್ತಾಪ ಮಾಡಿಲ್ಲ. ಅದು ಅನಿವಾರ್ಯ ಏರಿಕೆ ಎಂದೂ ಹೇಳಿದರು.

ಪಂಚಾಯತಗಳಲ್ಲಿ ಅವ್ಯವಹಾರ ಇದ್ದರೆ ನಮ್ಮ ಗಮನಕ್ಕೆ ತಂದರೆ ಬೀದಿಗಿಳಿದು ಹೋರಾಟ ಮಾಡ್ತೇವೆ ಎಂದೂ ಪ್ರತಿಕ್ರಿಯೆ ನೀಡಿದರು. ರೇಖಾ ಹೆಗಡೆ,‌ ಸಂಘಟನೆ ಕೊಟ್ಟ ಜವಬ್ದಾರಿ ಮಾಡುತ್ತಿದ್ದೇವೆ. ಮಹಿಳೆಯರಿಗೆ ಪ್ರಮುಖ ಆದ್ಯತೆ ನೀಡಿದ್ದೇವೆ‌ ಎಂದರು. ಲಂಚಾವತಾರ ಬಿಜೆಪಿ ಸರಕಾರದಲ್ಲಿ  ಕಡಿಮೆ ಇದೆ ಎಂದು ಹೇಳಿದರು.

Advertisement

ಶರ್ಮಿಲಾ, ದೀಪಾ, ಪ್ರಭಾವತಿ ಗೌಡ, ಚಂದ್ರಕಲಾ ಭಟ್ಟ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next