ಹುಕ್ಕೇರಿ: ಶ್ರೀನಿವಾಸ್ ಪ್ರಸಾದ್ ಅವರಿಗಿಂತ ಮೊದಲು ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದು ಮಾಜಿ ಸಚಿವ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೋಳಿ ಕಾಂಗ್ರೆಸ್ ವಿರುದ್ದ ತೀವ್ರ ಅಸಮಧಾನ ಹೊರ ಹಾಕಿದ್ದಾರೆ.
ಹುಕ್ಕೇರಿ ತಾಲೂಕಿನ ಅಲದಾಳ ಗ್ರಾಮದಲ್ಲಿ ಬುಧವಾರ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ದ ತಮ್ಮ ಅಸಮಧಾನ ಹೊರ ಹಾಕಿದ್ದಾರೆ.
ಸಹೋದರ ಲಖನ್ ವಿರುದ್ಧ ವಾಗ್ದಾಳಿ ನಡೆಸಿ ‘ಅವರ ಬಗ್ಗೆ ನಿಮಗೆ ತಿಳಿಯ ಬೇಕಾದರೆ ಗೋಕಾಕ್ನ ಬಾರ್ಗಳಲ್ಲಿ ಹೋಗಿ ಕುಳಿತುಕೊಳ್ಳಿ.ಎಂಥಹಾ ಮಾತುಗಳು ಕೇಳಿ ಬರುತ್ತದೆ, ಜನರ ಅಭಿಪ್ರಾಯ ಹೇಗಿದೆ ಎನ್ನುವುದು ನಿಮಗೆ ತಿಳಿಯುತ್ತದೆ’ ಎಂದರು.
ಸಿದ್ದರಾಮಯ್ಯ ಅವರು ಸಚಿವಸಂಪುಟ ಪುನಾರಚನೆ ಮಾಡಿದ ವೇಳೆ ಸತೀಶ್ ಅವರನ್ನು ಕೈ ಬಿಟ್ಟು ಸಹೋದರ ಗೋಕಾಕ್ ಶಾಸಕ ರಮೇಶ್ ಅವರಿಗೆ ಸ್ಥಾನ ನೀಡಿದ್ದರು.
ಇದೀಗ ಪಕ್ಷದಲ್ಲಿ ತಮಗಾದ ಅನ್ಯಾಯದ ಕುರಿತು ತೀವ್ರ ಅಸಮಧಾನಗೊಂಡಿರುವ ಸತೀಶ್ ಅವರು ಕಾಂಗ್ರೆಸ್ಗೆ ಗುಡ್ಬೈ ಹೇಳುವ ಸಾಧ್ಯತೆಗಳಿದ್ದು ಜೆಡಿಎಸ್ ಸೇರ್ಪಡೆ ಕುರಿತು ಒಂದು ಸುತ್ತಿನ ಮಾತುಕತೆಗಳು ಮುಗಿದ್ದಿದ್ದು ಇದೀಗ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುತ್ತಿರುವ ಬಗ್ಗೆ ವರದಿಯಾಗಿದೆ.
ಜಾರಕಿಹೋಳಿ ಸಹೋದರರ ಪೈಕಿ ಬಾಲಚಂದ್ರ ಅವರು ಬಿಜೆಪಿಯಲ್ಲಿದ್ದು ಅರಭಾವಿಯ ಶಾಸಕರಾಗಿದ್ದಾರೆ.