Advertisement
ನಂತರ ಕಾನೂನು ವಿವಿ ಕುಲಪತಿ ಪ್ರೊ| ಈಶ್ವರ ಭಟ್ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿಕೊಂಡ ಶಾಸಕರು, ವಿವಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. ಈಗಾಗಲೇ ಸೆಮಿಸ್ಟರ್ ಆರಂಭಕ್ಕೆ ಶುಲ್ಕ ಭರಿಸಿಕೊಂಡರೂ ತರಗತಿ ಆರಂಭಿಸಲು ಏನು ತೊಂದರೆ. ಪರೀಕ್ಷೆಯನ್ನು 15ರಿಂದ ನಡೆಸುವ ಉದ್ದೇಶ ಏನಿದೆ. ವಿದ್ಯಾರ್ಥಿಗಳ ಒತ್ತಾಸೆಯಂತೆಭೌತಿಕ ಪರೀಕ್ಷೆ ಕೈಬಿಟ್ಟು ಆನ್ಲೈನ್ ಮೂಲಕಅಥವಾ ಇನ್ನಿತರೆ ಮಾದರಿಯಲ್ಲಿ ಪರೀಕ್ಷೆ ನಡೆಸಲುಸಾಧ್ಯವೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
Related Articles
Advertisement
ಈ ವಿಷಯ ಕುರಿತು ಡಿ.13ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲೂ ವಿಷಯ ಪ್ರಸ್ತಾಪಿಸಿವಿದ್ಯಾರ್ಥಿಗಳ ಹಿತ ಕಾಯುವುದಾಗಿ ಶಾಸಕರು ತಿಳಿಸಿದರು.
ನಂತರ ಪ್ರತಿಭಟನಾ ನಿರತ ಕೆಲ ಕಾನೂನುವಿದ್ಯಾರ್ಥಿಗಳನ್ನು ಕರೆದುಕೊಂಡು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಾಸಕ ಪ್ರಸಾದ ಅಬ್ಬಯ್ಯ,ಕಾನೂನು ವಿವಿ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಅಧಿ ವೇಶನದಲ್ಲಿಪ್ರಶ್ನಿಸಿ ಮುಖ್ಯಮಂತ್ರಿ ಅವರಿಂದಲೇ ಉತ್ತರ ಕೊಡಿಸುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಶಿವ ಬೆಂಡಿಗೇರಿ, ವರುಣಗೌಡ,ರಿತಿಕ್, ರೋಹಿತ್ ಘೋಡಕೆ, ಮುಜಾಹಿದ್ ಖಾನ್, ರೋಹಿತ ಇನ್ನಿತರದ್ದರು.