Advertisement

ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ

05:41 PM May 17, 2022 | Team Udayavani |

ರಬಕವಿ-ಬನಹಟ್ಟಿ: ಇದು ಚುನಾವಣೆಯ ವರ್ಷವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಸರ್ಕಾರದ ಯೋಜನೆ ಮತ್ತು ಸಾಧನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಪಾತ್ರ ಮುಖ್ಯವಾಗಿದೆ. ಪ್ರತಿಯೊಂದು ಸಮುದಾಯವನ್ನು ನಮ್ಮ ಸಂಘಟನೆ ತಲುಪಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಮಂಗಳವಾರ ಅವರು ಬನಹಟ್ಟಿಯಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ನಗರ ಮತ್ತು ಗ್ರಾಮೀಣ ಮಂಡಳದ ಪ್ರಕೋಷ್ಠ ಹಾಗೂ ವಿಧಾನ ಪರಿಷತ್ ಚುನಾವಣೆಯ ನಿಮಿತ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾನೂನು, ಪಂಚಾಯ್ತ ರಾಜ, ಅಸಂಘಟಿತ ಕಾರ್ಮಿಕರು, ವೃತ್ತಿಪರ ಉದ್ಯೋಗಸ್ಥರು, ಕೈಗಾರಿಕೆ, ಸಹಕಾರ, ವೈದ್ಯಕೀಯ, ಶಿಕ್ಷಣ, ಸೈನಿಕ ಹಾಗೂ ಮೀನುಗಾರಿಕೆ, ಹಿರಿಯ ನಾಗರಿಕರು ಸೇರಿದಂತೆ ನಗರ ಮತ್ತು ಗ್ರಾಮೀಣ ಮಂಡಳದಲ್ಲಿ ಒಟ್ಟು 21 ಪ್ರಕೋಷ್ಠಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಕೋಷ್ಟದ ಕಾರ್ಯಕರ್ತರು ಈ ಎಲ್ಲ ಸಮುದಾಯದವರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಸರ್ಕಾರ ಹಿರಿಯ ನಾಗರಿಕರ ಪಿಂಚಣಿಯ ಆದೇಶ ಪತ್ರಗಳನ್ನು ಕೇವಲ 72 ಗಂಟೆಗಳಲ್ಲಿ ನೀಡುವ ವ್ಯವಸ್ಥೆಯನ್ನು ಮಾಡಿದೆ. ಸರ್ಕಾರ ನೇಕಾರರ ಸಲುವಾಗಿ ಅನೇಕ ಸೌಲಭ್ಯಗಳನ್ನು ನೀಡಿದರೂ ನೇಕಾರರು ಇನ್ನೂ ಸಂಕಷ್ಟದಲ್ಲಿದ್ದಾರೆ. ಅವರಿಗೂ ಕೂಡಾ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಕ್ರಮ ತೆಗೆದುಕೊಳ್ಳಬೇಕು.

ಅದೇ ರೀತಿಯಾಗಿ ವಿಧಾನ ಪರಿಷತ್ ಮತ್ತು ಸ್ಥಳೀಯ ಸಂಸ್ಥೆಗಳ ಉಪ ಚುಣಾವಣೆಗಳು ನಡೆಯಲಿವೆ. ಆದ್ದರಿಂದ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಮತ್ತು ಪದವಿಧರ ಕ್ಷೇತ್ರದ ಹನಮಂತ ನಿರಾಣಿಯವರಿಗೆ ಮತ ಚಲಾಯಿಸುವಂತೆ ಶಿಕ್ಷಕ ಮತ್ತು ಪದವಿಧರರಿಗೆ ಕಾರ್ಯಕರ್ತರು ತಿಳಿಸಬೇಕು ಎಂದು ಸವದಿ ತಿಳಿಸಿದರು.

Advertisement

ಕಾರ್ಯಕ್ರಮದ ವೇದಿಕೆಯ ಮೇಲೆ ರಾಜು ಅಂಬಲಿ, ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ, ಬಸಪ್ರಭು ಹಟ್ಟಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಬಾಬಾಗೌಡ ಪಾಟೀಲ, ಪುಂಡಲೀಕ ಪಾಲಭಾವಿ, ನಾಗಪ್ಪ ಅಂಬಿ, ಶ್ರೀಶೈಲ ಬೀಳಗಿ ಸೇರಿದಂತೆ ಅನೇಕರು ಇದ್ದರು.

ಶಂಕರ ಹುನ್ನೂರ ಕಾರ್ಯಕ್ರಮ ನಡೆಸಿಕೊಟ್ಟರು. ಸಭೆಯಲ್ಲಿ ಆನಂದ ಕಂಪು, ಪ್ರಭು ಪೂಜಾರಿ, ಬಸವರಾಜ ತೆಗ್ಗಿ, ಧರೆಪ್ಪ ಕಿತ್ತೂರ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ಸುನೀತಾ ನಂದಗೊಂಡ ಸೇರಿದಂತೆ ತೇರದಾಳ ಮತಕ್ಷೇತ್ರದ ನಗರ ಮತ್ತು ಗ್ರಾಮೀಣ ಮಂಡಳದ ಪ್ರಮುಖರು ಮತ್ತು ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next