Advertisement

ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ: ಶಾಸಕ ಶರತ್‌ ಬಚ್ಚೇಗೌಡ

01:31 PM Mar 04, 2023 | Team Udayavani |

ಹೊಸಕೋಟೆ: ಸಚಿವ ಎಂಟಿಬಿ ನಾಗರಾಜು ಹೇಳಿದಂತೆ ಧರ್ಮಸ್ಥಳ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸವಾಲು ಹಾಕಿದ್ದು, ಸ್ವೀಕರಿಸಿದ್ದೇನೆ. ಅವರು 10 ಕೋಟಿ ರೂ. ಅನುದಾನ ತಡೆ ಹಿಡಿದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಶಾಸಕ ಶರತ್‌ ಬಚ್ಚೇಗೌಡ ಪ್ರತಿ ಸವಾಲು ಹಾಕಿದರು.

Advertisement

ತಾಲೂಕಿನ ತಿರುಮಲಶೆಟ್ಟಹಳ್ಳಿ ಪೊಲೀಸ್‌ ಠಾಣೆಯಿಂದ ಸೌಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಸಂಸದ ಬಿ.ಎನ್‌.ಬಚ್ಚೇಗೌಡ ಅವರೊಂದಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಾಮಗಾರಿ ನಿಲ್ಲಿಸಲು ಮುಖ್ಯಮಂತ್ರಿಗಳ ಕಚೇರಿಯಿಂದ ನೇರವಾಗಿ ಬಂದಿರುವ ಮಾಹಿತಿ ನಮ್ಮಲಿದೆ. ಗಾಂಧಿ ಪ್ರತಿಮೆ ಬಳಿ ರಾತ್ರಿ ಉಪವಾಸ ಸತ್ಯಾಗ್ರಹ ಮಾಡುವಾಗ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿಗಳಿಂದ ಹಣ ಬಿಡುಗಡೆ ಮಾಡುವ ಭರವಸೆ ಮತ್ತು ನಮ್ಮ ನಾಯಕರಾದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ಥಳಕ್ಕೆ ಬಂದು ಆಶ್ವಾಸನೆ ಕೊಟ್ಟ ಮೇಲೆ ನಾವು ಧರಣಿ ಅಂತ್ಯ ಮಾಡಿದ್ದೇನೆ ಎಂದು ಹೇಳಿದರು.

ಸಚಿವ ನಾಗರಾಜ್‌ ಹೇಳಿದ ಪ್ರಕಾರ ಅಧಿವೇಶನದ ವೇಳೆ ಏಕೆ ಮಾತನಾಡಲಿಲ್ಲ ಎಂಬುದಕ್ಕೆ ನಾಲ್ಕು ಗೋಡೆಗಳ ಮಧ್ಯೆ ಇರುವ ವಿಚಾರವನ್ನು ಏಕೆ ಸದನದಲ್ಲಿ ಮಾತನಾಡಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕೋಡಿಹಳ್ಳಿ ಸುರೇಶ್‌, ಮಲ್ಲಸಂದ್ರ ಶೇಷಪ್ಪ, ಸಮೇತನಹಳ್ಳಿ ಸೊಣ್ಣಪ್ಪ, ಬಿ.ಎಂ.ಪ್ರಕಾಶ್‌, ಸಮೇತನಹಳ್ಳಿ ಮರಿಯಪ್ಪ, ಟಿ.ಕೃಷ್ಣರೆಡ್ಡಿ,ಬಾಬುರೆಡ್ಡಿ, ಕೆ.ಕೃಷ್ಣಮೂರ್ತಿ, ಸಮೇತನಹಳ್ಳಿ ಮಂಜುನಾಥ್‌, ಡಿ.ಲಕ್ಷ್ಮೀ, ಮಂಜುಳಾ, ಯಮ್ಮಂಡಹಳ್ಳಿ ವೆಂಕಟರಮಣಪ್ಪ, ಲಕ್ಷ್ಮಣ್‌ಸಿಂಗ್‌, ಮಂಜುನಾಥ್‌ ಗೌಡ, ಶ್ರೀನಿವಾಸ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next