Advertisement

ಓಪನ್‌ ಕಾಸ್ಟಿಂಗ್‌ ಮೈನಿಂಗ್‌ ಕೈಬಿಡಲು ಮನವಿ 

12:53 PM Jan 27, 2023 | Team Udayavani |

ಕೆಜಿಎಫ್‌: ಕೇಂದ್ರ ಸರ್ಕಾರ ಕೆಜಿಎಫ್‌ನಲ್ಲಿ ಗಣಿಗಾರಿಕೆ ಪುನರ್‌ ಆರಂಭಿಸುವ ನಿಟ್ಟಿನಲ್ಲಿ ಓಪನ್‌ ಕಾಸ್ಟಿಂಗ್‌ ಮೈನಿಂಗ್‌ ನಡೆಸಲು ಯೋಚಿಸುತ್ತಿದೆ. ಇದರಿಂದಇಲ್ಲಿನ ವಾತಾವರಣ ಹದಗೆಡಲಿದೆ.ಈಗಾಗಲೇ ಗಣಿಯಲ್ಲಿ ಕಾರ್ಯನಿರ್ವಹಿಸಿರುವ ಬಹಳಷ್ಟು ಕಾರ್ಮಿಕರು ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗಿದ್ದು, ಓಪನ್‌ ಕಾಸ್ಟಿಂಗ್‌ ಮೈನಿಂಗ್‌ ಮಾಡಿದ್ದೇಆದಲ್ಲಿ, ಆರೋಗ್ಯ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಲಿವೆ. ಇದರಿಂದ ಈ ಯೋಜನೆ ಕೈಬಿಡುವಂತೆ ಮನವಿ ಮಾಡಲಾಗುವುದು ಎಂದು ಶಾಸಕಿ ರೂಪಕಲಾ ಹೇಳಿದರು.

Advertisement

ನಗರದ ಮುನಿಸಿಪಲ್‌ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ತುಳಿತಕ್ಕೆಒಳಗಾದವರ ಧ್ವನಿಯಾಗಿ ಡಾ.ಬಿ.ಆರ್‌. ಅಂಬೇಡ್ಕರ್‌ ವಿಶ್ವದಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ರಚಿಸುವ ಮೂಲಕ

ಶೋಷಿತ ವರ್ಗದವರಿಗೆ ನ್ಯಾಯ ಒದಗಿಸಿದ್ದಾರೆ. ಆರೋಗ್ಯ, ಶಿಕ್ಷಣ, ರಕ್ಷಣೆ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ರಂಗಗಳಲ್ಲೂ ಅಭಿವೃದ್ಧಿ ಸಾಧಿ ಸಲು ಅಗತ್ಯ ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್‌ ಗೆ ಸಲ್ಲುತ್ತದೆ ಎಂದು ತಿಳಿಸಿದರು.

ಅಭಿವೃದ್ಧಿ ಕಾರ್ಯ: ಕ್ಷೇತ್ರದ ಜನತೆ ತಮ್ಮ ಮೇಲೆ ನಂಬಿಕೆಯಿಟ್ಟು ಆಶೀರ್ವದಿಸಿದ್ದರಿಂದ, 5 ವರ್ಷ ರಸ್ತೆ, ಚರಂಡಿ, ಕುಡಿಯುವ ನೀರು, ಮಿನಿ ವಿಧಾನಸೌಧ, ತಾಪಂ ಕಟ್ಟಡ, ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ ತುರ್ತು ಚಿಕಿತ್ಸಾ ಘಟಕ,ನಗರದ ಪ್ರಮುಖ ರಸ್ತೆಗಳು ದ್ವಿಪಥವಾಗಿಪರಿವರ್ತಿಸಿ, ಹತ್ತು ಹಲವು ಅಭಿವೃದ್ಧಿಕಾರ್ಯ ಮಾಡಿರುವುದಾಗಿ ಹೇಳಿದರು.

ಮಾಲಿಕತ್ವ, ನಿವೇಶನ ಹಂಚಿಕೆ: ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನಷ್ಟುಯೋಜನೆಗಳನ್ನು ಜಾರಿಗೊಳಿಸಲು ಯೋಚಿಸಿದ್ದು, ಕೈಗಾರಿಕೆಗಳ ಸ್ಥಾಪನೆ, ಬಿಜಿಎಂಎಲ್‌ ಕಾರ್ಖಾನೆ ಕಾರ್ಮಿಕರುವಾಸಿಸುತ್ತಿರುವ ಸ್ಥಳದ ಮಾಲಿಕತ್ವಕೊಡಿಸುವುದು, ನಿವೇಶನ ರಹಿತರಿಗೆನಿವೇಶನ ಹಂಚಿಕೆ ಮೊದಲ ಕಾರ್ಯಗಳನ್ನುಆದ್ಯತೆ ಮೇಲೆ ಮಾಡಲಾಗುವುದು ಎಂದು ಭರವಸೆ ನೀಡಿದರು.

Advertisement

ಸಂವಿಧಾನ ಪರಮೋತ್ಛ ಗ್ರಂಥ: ಎಸ್ಪಿ ಡಾ.ಕೆ.ಧರಣಿದೇವಿ ಮಾತನಾಡಿ,ದೇಶದ ಪ್ರತಿಯೊಬ್ಬ ಪ್ರಜೆ ಹೇಗೆಸನ್ಮಾರ್ಗದಿಂದ ವರ್ತಿಸಬೇಕೆಂಬ ಬಗ್ಗೆಅಂಬೇಡ್ಕರ್‌ ಬರೆದಿರುವ ಸಂವಿಧಾನ ದಲ್ಲಿ ತಿಳಿಸಿದ್ದಾರೆ. ಜೀವನದಲ್ಲಿ ನಾವುಹೇಗೆ ನಡೆದುಕೊಳ್ಳಬೇಕೆಂಬ ಸ್ಪಷ್ಟನಿರ್ದೇಶನವನ್ನು ತಿಳಿಸಿಕೊಟ್ಟಿದ್ದಾರೆ.ಸಂವಿಧಾನ ನಮಗೆ ಅತ್ಯಂತ ಪರಮೋತ್ಛ ಗ್ರಂಥವಾಗಿದೆ ಎಂದರು.

ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳಿ: ಐಕ್ಯತೆ ಎನ್ನುವುದು ದೇಶದ ಶಕ್ತಿ ಎನ್ನುವುದಕ್ಕೆ ಸಂಬಂಧಿಸಿದ್ದರೆ, ಸಮಗ್ರತೆ ಎನ್ನುವುದು ದೇಶದಲ್ಲಿನ ಮೌಲ್ಯಗಳ ವ್ಯವಸ್ಥೆಗೆಸಂಬಂಧಿಸಿದ್ದಾಗಿದೆ. ಈ ಶಕ್ತಿ ಎನ್ನುವುದುವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತುನಾಗರಿಕರಿಂದ ಬರುವಂತದ್ದಾಗಿದೆ. ಈಶಕ್ತಿಯನ್ನು ಸಂವಿಧಾನದಲ್ಲಿ ಉಲ್ಲೇಖೀಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳಬೇಕಾಗಿದೆ ಎಂದರು.

ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿ  ,ಸ್ವಾಮಿ, ಉಪಾಧ್ಯಕ್ಷೆ ದೇವಿಗಣೇಶ್‌,ತಹಶೀಲ್ದಾರ್‌ ಕೆ.ಎನ್‌.ಸುಜಾತ, ಇಒಮಂಜುನಾಥ್‌, ಪೌರಾಯುಕ್ತೆ ಅಂಬಿಕಾ, ಬಿಇಒ ಚಂದ್ರಶೇಖರ್‌, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಹೀರ್‌ ಅಬ್ಟಾಸ್‌, ಡಿವೈಎಸ್‌ಪಿ ರಮೇಶ್‌ ಮೊದಲಾದವರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next