Advertisement

ಸಂಸದರ ಮಾತು ಅವರ ಸಂಸ್ಕಾರವನ್ನು ತೋರಿಸಿದೆ

04:20 PM Sep 25, 2022 | Team Udayavani |

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಅವರು ನನ್ನ ಬಗ್ಗೆ ಏಕವಚನದಲ್ಲಿ ವಾಗ್ಧಾಳಿ ನಡೆಸಿರುವುದು ಹತಾಶೆಯ ಪ್ರತೀಕ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರು ತಿರುಗೇಟು ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್‌ ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಒಬ್ಬ ಶಾಸಕನ ಬಗ್ಗೆ ಅವರಾಡಿರುವ ಮಾತುಗಳು ಅವರ ಸಂಸ್ಕಾರಕ್ಕೆ ಸಾಕ್ಷಿಯಾಗಿವೆ. ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂಬ ಬಗ್ಗೆ ಅವರಿಗೆ ಒಂದು ಕ್ಲಾಸ್‌ ತೆಗೆದುಕೊಂಡರೆ ಒಳ್ಳೆಯದು. ಬಹುಶಃ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಅವರಿಗೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಪ್ರಬುದ್ಧತೆ ಇಲ್ಲ: ನನಗೆ ಹಾಸನ ಜಿಲ್ಲೆಯ ಜನರು ನನ್ನ ಸೋಲಿಸಲು ಕಾಯುತ್ತಿದ್ದಾರೆ ಎಂದು ಸಂಸದರು ಹೇಳಿ ದ್ದಾರೆ. ಆದರೆ, ನಾನು ಚುನಾವಣೆಗೆ ನಿಲ್ಲುವುದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ. ಓಟು ಹಾಕು ವವರು ಹಾಸನ ಕ್ಷೇತ್ರದ ಜನತೆ. ಜಿಲ್ಲೆಯ ಜನರಲ್ಲ. ಆ ಬಗ್ಗೆಯೂ ಅವರಿಗೆ ಮಾಹಿತಿ ಇಲ್ಲ. ಪ್ರಬುದ್ಧತೆ ಇಲ್ಲದೆ ತಾತನ ಹೆಸರು ಹೇಳಿಕೊಂಡು ರಾಜಕಾರಣ ಮಾಡಲು ಬಂದರೆ ಹೀಗೆ ಆಗುವುದು ಎಂದು ವ್ಯಂಗ್ಯವಾಡಿದರು.

ಪಿಕ್ಚರ್‌ ಇನ್ನೂ ಪ್ಲೇ ಆಗಿಲ್ಲ: 2023ರ ಸೆಮಿಫೈನಲ್‌ ನಲ್ಲಿ ನಾನು ಹಾಸನ ಕ್ಷೇತ್ರದಲ್ಲಿ ಗೆಲ್ತಿàನಿ. ಪಕ್ಷದ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿ ಸ್ತೀನಿ. ಹಿಂದೆ ನಡೆದ ಎಂಪಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನವರ ಕಾಲು ಹಿಡಿದು ಎಂಪಿ ಆದರು. 2024ರ ಎಂಪಿ ಚುನಾವಣೆಯಲ್ಲಿ 2019ರ ಚುನಾವಣೆ ಪರಿಸ್ಥಿತಿ ಇರಲ್ಲ. ಮೂರೂ ಪಕ್ಷಗಳ ಅಭ್ಯರ್ಥಿ ಇರ್ತಾರೆ. ಆಗ ಪರದೆ ಮೇಲೆ ಪಿಕ್ಚರ್‌ ಹೇಗೆ ತೋರಿಸ್ತೀನಿ ನೋಡಲಿ ಎಂದು ಸವಾಲು ಹಾಕಿದರು.

ಚುನಾವಣೆಗೆ ನಾನು ಸಿದ್ಧ: ನಾನಂತೂ ಚುನಾವಣೆಗೆ ರೆಡಿಯಾಗಿದ್ದೇನೆ. ಇದುವರೆಗೂ ಹಾಸನ ವಿಧಾನಸಭಾ ಕ್ಷೇತ್ರದ ಯಾವುದೇ ಹಳ್ಳಿಗೂ ಹೋಗದ ಸಂಸದರು, ಈಗಲಾದರೂ ಒಮ್ಮೆ ಕ್ಷೇತ್ರವನು ಸುತ್ತಿ ಬರಲಿ. ಇವರು ಸಂಸದರಾದ ಮೇಲೆ ಯಾವುದೇ ಶಾಶ್ವತ ಯೋಜನೆ ಜಿಲ್ಲೆಗಾಗಲಿ ಹಾಸನ ವಿಧಾನಸಭಾ ಕ್ಷೇತ್ರ ಕ್ಕಾಗಲಿ ಮಂಜೂರು ಮಾಡಿಸಿಲ್ಲ ಎಂದು ಆರೋಪಿಸಿದರು.

Advertisement

ಕ್ಷೇತ್ರ ಸುತ್ತಾಡಿದರೆ ಭವಾನಿ ಸ್ಪರ್ಧಿಸಲ್ಲ: ಹಾಸನ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿರುವ ಭವಾನಿ ರೇವಣ್ಣ ಅವರು ಕ್ಷೇತ್ರದ ಎಲ್ಲ ಹಳ್ಳಿಗಳನ್ನೂ ಸುತ್ತಾಡಿ ಬಂದರೆ, ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ, ಕ್ಷೇತ್ರದ ಜನರ ಸ್ಪಂದನೆ ಗೊತ್ತಾಗುತ್ತದೆ. ಆ ಮೇಲೆ ಭವಾನಿ ರೇವಣ್ಣ ಅವರು ಚುನಾವಣೆಗೆ ನಿಲ್ಲೋದಿಲ್ಲ ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ಟಾಂಗ್‌ ಕೊಟ್ಟರು.

ಹಾಸನ ಕ್ಷೇತ್ರದಲ್ಲಿ ಈಗ ಸಕ್ರಿಯರಾಗಿರುವ ಭವಾನಿ ರೇವಣ್ಣ ಅವರು ಅಭ್ಯರ್ಥಿ ಆದರೆ ನನಗೆ ಸಂತೋಷ. ಅವರು ಸ್ಪರ್ಧೆಗಿಳಿಯುವ ಧೈರ್ಯವನ್ನು ಗಣಪತಿ ಕೊಡಲಿ ಎಂದು ಪ್ರಾರ್ಥನೆ ಮಾಡುವೆ ಎಂದು ವ್ಯಂಗ್ಯವಾಡಿದರು.

ಭವಾನಿ ಅವರಿಗೆ 3 ಸ್ಥಾನ: ವೈಟ್‌ ಪ್ಯಾಂಟ್‌, ವೈಟ್‌ ಶರ್ಟ್‌ ಹಾಕಿಕೊಂಡ ಐದಾರು ಜನರನ್ನು ಜೊತೆಯಲ್ಲಿ ಇಟ್ಟುಕೊಂಡಿರು ವ ಸಂಸದರು ಚುನಾವಣೆ ಗೆಲ್ತಿàನಿ ಎಂಬ ಭ್ರಮೆಯಲ್ಲಿದ್ದಾರೆ. ನನ್ನ ಸವಾಲು ಸ್ವೀಕರಿಸಿ ಹಾಸನ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಬರಲಿ, ನೋಡೋಣ.ಅವರ ತಾಯಿ ಭವಾನಿ ರೇವಣ್ಣ ಅವರನ್ನು ಕರೆ ತಂದು ನಿಲ್ಲಿಸಿದರೂ ಅವರಿಗೆ ಮೂರನೇ ಸ್ಥಾನವೇ ಗತಿ ಎಂದು ಶಾಸಕ ಪ್ರೀತಂ ಜೆ ಗೌಡ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next