Advertisement

ವಿಜಯನಗರ ಕಾಲುವೆ ಕಾಮಗಾರಿ ತಡೆಯದಂತೆ ಅರಣ್ಯ ಇಲಾಖೆಗೆ ಶಾಸಕ ಮುನವಳ್ಳಿ ಸೂಚನೆ

06:30 PM Jun 07, 2022 | Team Udayavani |

ಗಂಗಾವತಿ: ಪುರಾತನ ವಿಜಯನಗರ ಕಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು ಪ್ರಸ್ತುತ ಸಾಣಾಪೂರ ಹತ್ತಿರ ಕಾಮಗಾರಿ ನಡೆಯುತ್ತಿದ್ದು ಅರಣ್ಯ ಇಲಾಖೆಯವರು ಕಾಮಗಾರಿ ತಡೆಯದಂತೆ ಶಾಸಕ ಪರಣ್ಣ ಮುನವಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅವರು ತಾಲೂಕಿನ ಸಾಣಾಪೂರ ಗ್ರಾಮದ ಸರ್ವೇ ನಂಬರ್ 1 ರಲ್ಲಿ ಹರಿಯುವ ವಿಜಯನಗರ ಕಾಲುವೆ ಅರಣ್ಯ ವ್ಯಾಪ್ತಿಗೆ ಬರುತ್ತಿದ್ದು ಇಲ್ಲಿರುವ ಕಲ್ಲುಗುಂಡುಗಳನ್ನು ಕಾಂಪ್ರೆಸರ್ ಮೂಲಕ ಸ್ಪೋಟ ಮಾಡುವುದನ್ನು ಅರಣ್ಯ ಇಲಾಖೆಯವರು ಆಕ್ಷೇಪಿಸಿ ಟಾಕ್ಟರ್ ಕಾಂಪ್ರೆಸರ್ ಸೀಜ್ ಮಾಡಿ ಕಾಮಗಾರಿ ನಿಲ್ಲಿಸಿದ್ದರು. ಕಳೆದ ಒಂದು ವಾರದಿಂದ ಕಾಲುವೆ ದುರಸ್ತಿ ಕಾರ್ಯ ನಿಲುಗಡೆಯಾಗಿತ್ತು.  ವಿಜಯನಗರ ಕಾಲುವೆ ವ್ಯಾಪ್ತಿಯ ಸಾಣಾಪೂರ ದಿಂದ ಸಂಗಾಪೂರ ಗ್ರಾಮಗಳ ರೈತರು ಕಾಲುವೆ ದುರಸ್ತಿ ಕಾಮಗಾರಿ ನಿಲುಗಡೆ ಕುರಿತು ಶಾಸಕ ಪರಣ್ಣ ಮುನವಳ್ಳಿಯವರ ಗಮನಕ್ಕೆ ತಂದಿದ್ದ ರಿಂದ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು 700 ವರ್ಷಗಳ ಹಳೆಯ ಪುರಾತನ ಕಾಲುವೆ ಇದಾಗಿದ್ದು ಅರಣ್ಯ ಇಲಾಖೆಯವರು ಕಾಮಗಾರಿ ಕುರಿತು ಆಕ್ಷೇಪವೆತ್ತ ಬಾರದು. ಈಗಾಗಲೇ ಡ್ಯಾಂ ಭರ್ತಿಯಾಗಿದ್ದು ಮುಂಗಾರು ಹಂಗಾಮಿನ ಭತ್ತದ ನಾಟಿ ಮಾಡುವ ಕಾಲ ಸಮೀಪವಾಗಿದ್ದು ಬೇಗನೆ ಕಾಮಗಾರಿ ಮುಗಿಸಬೇಕಿದ್ದು ಕೂಡಲೇ ಕಾಮಗಾರಿ ಆರಂಭಿಸುವಂತೆ  ಸೂಚನೆ ನೀಡಿದರು.

ಜಪಸಂಪನ್ಮೂಲ ಇಲಾಖೆಯ ಅಭಿಯಂತರರಾದ ಸತ್ಯಪ್ಪ, ಅಮರೇಶ, ಕಂಪ್ಲಿ ಅಮರೇಶ, ರೈತರಾದ ಸುದರ್ಶನವರ್ಮಾಮ ಬುಕ್ಕದೇವರಾಯ, ಹರಿಹರದೇವರಾಯ,ನಾರಾಯಣಗೌಡ, ನ್ಯಾಯವಾದಿ ಎಚ್.ಸಿ.ಯಾದವ್, ರಘುರಾಮರೆಡ್ಡಿ, ಮಹೆಬೂಬ ಪಟುವಾರಿ ಸೇರಿ ಸಂಗಾಪೂರ, ಗೂಗಿಬಂಡಿ, ಆನೆಗೊಂದಿ, ಹನುಮನಹಳ್ಳಿ, ಸಾಣಾಪೂರ ಸೇರಿ ಸುತ್ತಲಿನ ಗ್ರಾಮಗಳ ರೈತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next