Advertisement

ಹರಕೆ ತೀರಿಸಲು ಸರಕಾರದ ಮೊರೆ ಹೋದ ಶಾಸಕ!

01:18 AM Jan 17, 2021 | Team Udayavani |

ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂದು ತಾಲೂಕಿನ ಫಲ್ಗುಣಿ ಕಾಲನಾಥೇಶ್ವರ ದೇವರಿಗೆ ಹರಕೆ ಹೊತ್ತಿದ್ದು, ಈಗ ಹರಕೆ ತೀರಿಸಲು ಸರಕಾರ ಹಣ ಬಿಡುಗಡೆ ಮಾಡಿದೆ.

Advertisement

ಯಡಿಯೂರಪ್ಪ  ಸಿಎಂ ಆದಲ್ಲಿ ದೇವಸ್ಥಾನಕ್ಕೆ ಮರದ ರಥ ಮಾಡಿಸಿ ಕೊಡುವುದಾಗಿ ಹಾಗೂ ತಮ್ಮ ಕ್ಷೇತ್ರದ ಬೆಟ್ಟಗೆರೆ ಕಾಲಭೈರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡುವುದಾಗಿ ಹರಕೆ ಹೊತ್ತಿದ್ದರಂತೆ. ಹರಕೆ ತೀರಿಸಲು ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಇದಕ್ಕೆ ಸ್ಪಂದಿ ಸಿರುವ ಸಿ.ಎಂ. ಒಟ್ಟು  30 ಲಕ್ಷ ಬಿಡುಗಡೆ ಮಾಡಿದ್ದಾರೆ.  ಈ ವಿಷಯವನ್ನು ಶಾಸಕರು  ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  ಶಾಸಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next