Advertisement

ಯಾರ ಒಲೈಕೆಗಾಗಿ ನಮ್ಮ ವಿರುದ್ಧ ಎಫ್ಐಆರ್ ಮಾಡಸಿದ್ದೀರಿ ಗೊತ್ತು: ಶಾಸಕ ಮಹೇಶ ಟೆಂಗಿನಕಾಯಿ

03:24 PM Jan 07, 2024 | Team Udayavani |

ಹುಬ್ಬಳ್ಳಿ: ಪ್ರತಿಭಟನಾಕಾರರ ಮೇಲೆ ಕಾಂಗ್ರೆಸ್ ನವರು ಕೇಸ್ ಮಾಡಿದ್ದಾರೆ. ಇಂತಹದಕ್ಕೆಲ್ಲ ನಾವು ಹೆದರಲ್ಲ ಎಂದು ಹು-ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಕುಟುಕಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಎಷ್ಟು ಕೇಸ್ ಹಾಕುತ್ತೀರಿ ಹಾಕಿ ನೋಡೋಣ ಎಂದರು.

ಈ ತರಹದ ಕೇಸ್ ಗಳಿಂದ ಏನನ್ನೂ ಸಾಧಿಸೋಕೆ ಆಗಲ್ಲ. ನಾವು ಯಾವ ವ್ಯಾಪಾರಸ್ಥರಿಗೆ ತೊಂದರೆ ಕೊಟ್ಟಿಲ್ಲ. ಅಂದು ಅಂಗಡಿ ಬಂದ್ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರ . ಸರ್ಕಾರವೇ ಪೊಲೀಸರ ಮೂಲಕ ಅಂಗಡಿ ಬಂದ್ ಮಾಡಿಸಿದ್ದು. ಹಿಂದೂ-ಮುಸ್ಲಿಂ ಜಗಳವನ್ನೂ ಹಚ್ಚಿಲ್ಲ. ಯಾರ ಒಲೈಕೆಗಾಗಿ ನಮ್ಮ ವಿರುದ್ಧ ಎಫ್ ಐ ಆರ್ ಮಾಡಸಿದ್ದೀರಿ ಗೊತ್ತು. ಹೈಕಮಾಂಡ್ ನಾಯಕರನ್ನು ಖುಷ್ ಮಾಡಲು ಹೀಗೆ ಮಾಡಿದ್ದೀರಿ. ಆರ್. ಅಶೋಕ, ಟೆಂಗಿನಕಾಯಿ, ಬೆಲ್ಲದ ಮೇಲೆ ಕೇಸ್ ಆಗಿದೆ ಎಂದು ಅವರಿಗೆ ಕಳುಹಿಸುತ್ತೀರಿ ಎಂದು ಹರಿಹಾಯ್ದರು.

ರಾಮ‌ಮಂದಿರ ಉದ್ಘಾಟನೆ ಹೇಗಾದರೂ ಅಡ್ಡಿ ಮಾಡಲು ಇದೆಲ್ಲ ನಾಟಕ. ಪ್ರತಿಭಟನೆ ನಮ್ಮ ಹಕ್ಕು, ಅದನ್ನು ಮೊಟಕಗೊಳಿಸುವ ಯತ್ನ ಸರ್ಕಾರ ಮಾಡಿದೆ. ಸರ್ಕಾರ ಏನು ಸಾಧಿಸುವುದಕ್ಕೆ ಹೊರಟಿದೆ. ಇದು ಕಾಲಚಕ್ರ. ಇನ್ನು ಆರು ತಿಂಗಳಲ್ಲಿ ಏನು ಆಗುತ್ತೆ ನೋಡಿ. ನೀವು ಶ್ರೀಕಾಂತ ಪೂಜಾರಿ ಮೇಲೆ 16 ಕೇಸ್ ಇದೆ ಎಂದು ಸುಳ್ಳು ಹೇಳಿದ್ದೀರಿ. ನಾವು ನಿಮ್ಮ ಮುಖ್ಯಮಂತ್ರಿ, ಗೃಹ ಮಂತ್ರಿಗಳ ಮೇಲೆ ಚೀಟಿಂಗ್ ಕೇಸ್ ಮಾಡುತ್ತೇವೆ. ನಿಮ್ಮ ಹಿಟ್ಲರ್ ರೂಲ್ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next