Advertisement

ಅಧಿಕಾರಿಗಳ ವಿರುದ್ಧ ಚರಂಡಿಗೆ ಇಳಿದು ಆಕ್ರೋಶ ಹೊರ ಹಾಕಿದ ಆಂಧ್ರ ಶಾಸಕ

01:21 PM Jul 06, 2022 | Team Udayavani |

ನೆಲ್ಲೂರು : ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಶಾಸಕ ಕೋಟಂರೆಡ್ಡಿ ಶ್ರೀಧರ್ ರೆಡ್ಡಿ ಅವರು ಉಮ್ಮಾರೆಡ್ಡಿ ಗುಂಟದಲ್ಲಿ ತುಂಬಿ ಹರಿಯುತ್ತಿರುವ ಚರಂಡಿಯಲ್ಲಿ ಇಳಿದು ಅಧಿಕಾರಿಗಳ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

Advertisement

ಇದನ್ನು ಸ್ವಚ್ಛಗೊಳಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕಿವಿಗೊಟ್ಟಿಲ್ಲ ಎಂದು ಶಾಸಕ ರೆಡ್ಡಿ ಅವರು ಈ ರೀತಿ ಆಕ್ರೋಶ ಹೊರ ಹಾಕಿ ಗಮನ ಸೆಳೆದಿದ್ದಾರೆ.

ಕ್ಷೇತ್ರದ ಜನತೆಗೆ ಉತ್ತರ ನೀಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಶಾಸಕ ಕೋಟಂರೆಡ್ಡಿ ಶ್ರೀಧರ್ ರೆಡ್ಡಿ ಹೇಳಿದ್ದು, ಅಧಿಕಾರಿಗಳಿಗೆ ಲಿಖಿತವಾಗಿ ಸರಿಯಾದ ಕಾಲಮಿತಿ ನೀಡುವಂತೆ ಒತ್ತಾಯಿಸಿದ ಅವರು, ಅವರು ಅದನ್ನು ಸ್ವಚ್ಛಗೊಳಿಸಲು ವಿಫಲವಾದರೆ, ನಾನು ಮತ್ತೆ ಬಂದು ಇಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next