Advertisement

ಸಿದ್ದರಾಮಯ್ಯ ವಿರುದ್ಧ ಶಾಸಕ ಜಿಟಿಡಿ ಹಕ್ಕುಚ್ಯುತಿ ಮಂಡನೆ

06:50 AM Feb 11, 2018 | Team Udayavani |

ಮೈಸೂರು: ಚುನಾಯಿತ ಪ್ರತಿನಿಧಿಯಲ್ಲದ ತಮ್ಮ ಮಗ ಡಾ.ಯತೀಂದ್ರ ಹಾಗೂ ಕಾಂಗ್ರೆಸ್‌ ಮುಖಂಡರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸರ್ಕಾರಿ ಅನುದಾನದ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕಾಂಗ್ರೆಸ್‌ ಮುಖಂಡ ಕೆ.ಮರಿಗೌಡ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಡುವ ಯಾವುದೇ ಗುದ್ದಲಿಪೂಜೆಗಳಿಗೆ ಮಾನ್ಯತೆ ಇಲ್ಲ ಎಂದು ಪತ್ರಿಕಾ ಪ್ರಕಟಣೆಯನ್ನೇ ನೀಡಿ ಕ್ಷೇತ್ರದಿಂದ ಹೊರಗಿಟ್ಟಿದ್ದರು. ಈಗ ಮುಖ್ಯಮಂತ್ರಿಯೇ ತಮ್ಮ ಮಗನನ್ನು ಕಳುಹಿಸಿ ಗುದ್ದಲಿಪೂಜೆ ಮಾಡಿಸುತ್ತಾರೆ. ಜನ ತಿರಸ್ಕಾರ ಮಾಡಿರುವ ಮಾಜಿ ಶಾಸಕ ಸತ್ಯನಾರಾಯಣ, ಜೈಲಿಗೆ ಹೋಗಿ ಬಂದ ಮರಿಗೌಡ ಕೂಡ ಅವರ ಜತೆಗಿರುತ್ತಾರೆ ಎಂದು ಟೀಕಿಸಿದರು.

ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷರಾಗಿರುವ ಡಾ.ಯತೀಂದ್ರ, ವರುಣಾ ಕ್ಷೇತ್ರದಲ್ಲೂ ಗುದ್ದಲಿ ಪೂಜೆ, ಉದ್ಘಾಟನೆ ಮಾಡುವಂತಿಲ್ಲ. ಆದರೆ, ಕಾಂಗ್ರೆಸ್‌ ಮುಖಂಡರು  ಮುಂಚಿತವಾಗಿ ಹಳ್ಳಿಗಳಿಗೆ ಹೋಗಿ ಜನರಿಗೆ ಹಣ ಕೊಟ್ಟು, ಸಿದ್ಧರಾಮಯ್ಯ ಅವರ ಮಗ ಬರುತ್ತಿದ್ದಾರೆ ಎಂದು ಹೇಳಿ ಹಾರ ತಂದುಕೊಟ್ಟು ಯತೀಂದ್ರಗೆ ಹಾಕಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ಸಂವಿಧಾನ ವಿರೋಧಿಗಳು ಎಂದು ಟೀಕೆ ಮಾಡುವ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಂವಿಧಾನವನ್ನೇ ಬುಡಮೇಲು ಮಾಡುತ್ತಿದ್ದಾರೆ. ಅಂಬೇಡ್ಕರ್‌ ಈಗ ಬದುಕಿದ್ದರೆ, ಸಿದ್ದರಾಮಯ್ಯ ಅವರ ಆಡಳಿತ ಕಂಡು ಹೃದಯಾಘಾತವಾಗುತ್ತಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next