Advertisement

Thirthahalli: ನೀರುಪಾಲಾಗಿದ್ದ ಕೃಷ್ಣಮೂರ್ತಿ ಕುಟುಂಬಕ್ಕೆ ಪರಿಹಾರ ವಿತರಿಸಿದ ಆರಗ

08:52 PM Aug 05, 2024 | Poornashri K |

ತೀರ್ಥಹಳ್ಳಿ: ಕೆಲ ದಿನಗಳ ಹಿಂದೆ ನೀರಿಗೆ ಬಿದ್ದು ಮರಣ ಹೊಂದಿದ ಕೃಷ್ಣ ಮೂರ್ತಿ ನಾಯ್ಕ ಅವರ ಕುಟುಂಬಕ್ಕೆ ಸೋಮವಾರ (ಆ.5) ಶಾಸಕ ಆರಗ ಜ್ಞಾನೇಂದ್ರ ಅವರು ಪರಿಹಾರ ಧನವನ್ನು ನೀಡಿ ಸಂತಾಪ ಸೂಚಿಸಿದರು.

Advertisement

ದೇವಂಗಿಯಲ್ಲಿ ಕೆಲ ದಿನಗಳ ಹಿಂದೆ ತುಂಬಿ ಹರಿಯುತ್ತಿದ್ದ ಉಂಟೂರು ಹಳ್ಳದಲ್ಲಿ ನೀರಿಗೆ ಬಿದ್ದು ಮರಣ ಹೊಂದಿದ ರೈತ ಕೃಷ್ಣಮೂರ್ತಿ ನಾಯ್ಕ ಅವರ ಪುತ್ರ ಪ್ರಸನ್ನರವರಿಗೆ ಸರ್ಕಾರದಿಂದ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಪರಿಹಾರ ನಿಧಿಯ 5 ಲಕ್ಷ ರೂಪಾಯಿಗಳ ಚೆಕ್ ಅನ್ನು ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರರವರು ತಹಶೀಲ್ದಾರ್ ಕಚೇರಿಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಕ್ಕಣ್ಣ ಗೌಡರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣ ಅಧಿಕಾರಿಗಳಾದ ಶೈಲಾ, ಕ್ಷೇತ್ರದ ಶಿಕ್ಷಣ ಅಧಿಕಾರಿ ಗಣೇಶ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next