Advertisement

ಮಹಿಳೆಗೆ ಅಪಘಾತ ;ಶಾಸಕ ಅಭಯಚಂದ್ರ ಜೈನ್‌ ದರ್ಪ, ವ್ಯಾಪಕ ಟೀಕೆ

01:40 PM Jul 22, 2017 | |

ಮಂಗಳೂರು: ಬಜ್ಪೆಯ ಕಿನ್ನಿಪದವಿನಲ್ಲಿ ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್‌ ಅವರು ಪ್ರಯಾಣಿಸುತ್ತಿದ್ದ ಕಾರೊಂದು ಪಾದಚಾರಿ ಮಹಿಳೆಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆಶುಕ್ರವಾರ ಸಂಜೆ ನಡೆದಿದೆ. 

Advertisement

ಗಾಯಗೊಂಡಿರುವ ಮಹಿಳೆ ಕಿನ್ನಿಪದವಿನ ಜೈನಾಬಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆನ್ನಿಗೆ ಗಂಭೀರ ಪ್ರಮಾಣದ ಗಾಯವಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ. ಈ ಸಂಬಂಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಸ್ಪತ್ರೆಗೆ ಸೇರಿಸದೆ ದರ್ಪ ?
ಅಪಘಾತವಾದಬಳಿಕ ಮಾನವೀಯತೆ ಮೆರೆಯ ಬೇಕಿದ್ದ ಶಾಸಕ ಮತ್ತೆ ದರ್ಪ ಪ್ರದರ್ಶಿಸಿದ್ದು, ಅಪಘಾತಕ್ಕೀಡಾದ ಮಹಿಳೆ ನ್ಯಾಯ ಕೇಳಿದಾಗ ನಿನಗೆ ರಸ್ತೆ ಕಾಣವುದಿಲ್ಲವೇ? ಯಾಕೆ ಅಡ್ಡ ಬಂದಿ  ಎಂದು ಹಾರಿಕೆಯ ಉತ್ತರ ನೀಡಿ ಆಕೆಯನ್ನು ತಳ್ಳಿದ್ದಾರೆ. ಈ ವೇಳೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ ನಿನ್ನ ಅಪ್ಪನಲ್ಲಿ ದೂರು ಕೊಡು ನಾನು ಹೆದರುವುದಿಲ್ಲ ಎಂದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. 

ಮಾಜಿ ಸಚಿವರ ಈ ನಡೆಯ  ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಹಿಂದೆಯೂ ಸಾರ್ವಜನಿಕವಾಗಿ ದರ್ಪ ತೋರಿ ಟೀಕೆಗೆ ಗುರಿಯಾಗಿದ್ದರು. 

ಈ ಬಗ್ಗೆ ವಿಧಾನ ಸಭಾ ಸಭಾಧ್ಯಕ್ಷರಿಗೆ ಪೊಲೀಸ್‌ ವರದಿ ಸಲ್ಲಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next