Advertisement

ಟ್ರ್ಯಾಕ್ಟರ್ ನಲ್ಲಿ ಬಂದು ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಚೆಲ್ಲಿದ ಶಾಸಕ ಅಭಯ ಪಾಟೀಲ್

10:09 AM Jul 25, 2021 | Team Udayavani |

ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂದು ಸ್ವತಃ ಶಾಸಕರು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿ ಮಹಾನಗರ ಪಾಲಿಕೆ ಆಯುಕ್ತರ ಮನೆ ಮುಂದೆ ಕಸವನ್ನು ಸುರಿದಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ

Advertisement

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕಸವಿಲೇವಾರಿ ಆಗದೇ ಇರುವುದರಿಂದ ಆಕ್ರೋಶಗೊಂಡು ವಿಶ್ವೇಶ್ವರಯ್ಯ ನಗರದಲ್ಲಿ ಇರುವ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್ ಅವರ ನಿವಾಸದ ಮುಂದೆ ಭಾನುವಾರ ಬೆಳಗಿನ ಜಾವ ಕಸವನ್ನು ಬೀಸಾಕಿದ್ದಾರೆ. ತಮ್ಮ ತಂಡದೊಂದಿಗೆ ತಾವೇ ಸ್ವತಃ ಕಸ ತುಂಬಿದ್ದ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಅಭಯ ಪಾಟೀಲ್ ಕಸವನ್ನು ಪಾಲಿಕೆ ಆಯುಕ್ತರ ಮನೆಯ ಗೇಟ್ ಹಾಕಿದ್ದಾರೆ.

ಇದನ್ನೂ ಓದಿ:ಜಮ್ಮುಕಾಶ್ಮೀರ: ಎನ್ ಕೌಂಟರ್ ಮೂಲಕ ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ನಂತರ ಕಸವನ್ನು ಅವರ ತಂಡದ ಸದಸ್ಯರೊಂದಿಗೆ ಮನೆ ಗೇಟ್ ತುಂಬಾ ಹರಡಿದ್ದಾರೆ. ಆದರೆ ಓರ್ವ ಜವಾಬ್ದಾರಿಯುತ ಶಾಸಕರಾಗಿ ಈ ರೀತಿ ಅಧಿಕಾರಿಗಳ ಮನೆ ಮುಂದೆ ಕಸವನ್ನು ಚೆಲ್ಲಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ರಲ್ಲಿ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next