Advertisement

ಪ್ರಿಯಾಳಿಂದ ಅಕ್‌ಬರ್‌ ಪ್ರತಿಷ್ಠೆ ನಾಶ: Sunday Guardian ಸಂಪಾದಕಿ

04:47 PM Nov 12, 2018 | Team Udayavani |

ಹೊಸದಿಲ್ಲಿ : ತನ್ನ ವಿರುದ್ಧ  ಮಾನಹಾನಿಕರ ಲೈಂಗಿಕ ಆರೋಪಗಳನ್ನು ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ದಾವೆಯನ್ನು ದಾಖಲಿಸಿರುವ ಮಾಜಿ ಕೇಂದ್ರ ಸಚಿವ ಎಂ ಜೆ ಅಕ್‌ಬರ್‌ ಅವರ ಮಾಜಿ ಮಹಿಳಾ ಉದ್ಯೋಗಿ, ಸಂಡೇ ಗಾರ್ಡಿಯನ್‌ ಸಂಪಾದಕಿ, ಜೊಯೀತಾ ಬಸು ಅವರು  “ಪ್ರಿಯಾ ರಮಣಿ ಅವರ ಆರೋಪಗಳಿಂದ ಅಕ್‌ಬರ್‌ ಅವರ ಪ್ರತಿಷ್ಠೆ ಸಂಪೂರ್ಣ ನಾಶವಾಗಿದೆ’ ಎಂದು ಇಂದು ಸೋಮವಾರ ದಿಲ್ಲಿ ಕೋರ್ಟಿಗೆ ಹೇಳಿದರು. 

Advertisement

ಅಕ್‌ಬರ್‌ ದಾಖಲಿಸಿರುವ ಮಾನಹಾನಿ ದಾವೆಗೆ ಬೆಂಬಲವಾಗಿ ಓರ್ವ ಸಾಕ್ಷಿದಾರಳಾಗಿ ಕೋರ್ಟಿನಲ್ಲಿ ಸಾಕ್ಷ್ಯ ನುಡಿದ ಜೊಯೀತಾ ಬಸು ಅವರು, “ಪ್ರಿಯಾ ರಮಣಿ ತನ್ನ ಎಲ್ಲ ಟ್ವೀಟ್‌ಗಳನ್ನು ಉದ್ದೇಶಪೂರ್ವಕವಾಗಿ ಮತ್ತು ಅಕ್‌ಬರ್‌ ಅವರ ಪ್ರತಿಷ್ಠೆ ಮತ್ತು ಸದ್ಭಾವನೆಯನ್ನು ನಾಶ ಗೈಯುವುದಕ್ಕಾಗಿ’  ಮಾಡಿದ್ದಾರೆ’ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ಗೆ ಹೇಳಿದರು. 

ಪತ್ರಕರ್ತೆಯಾಗಿ ನಾನು ಸುಮಾರು 20 ವರ್ಷಗಳ ಕಾಲ ಅಕ್‌ಬರ್‌ ಜತೆಗೆ ಕೆಲಸ ಮಾಡಿದ್ದೇನೆ; ಪ್ರಿಯಾ ರಮಣಿ ಆರೋಪಿಸಿರುವಂತಹ ಯಾವುದೇ ಬಗೆಯ ಅಹಿತಕರ ಅನುಭವಗಳು ಅಕ್‌ಬರ್‌ ಅವರಿಗೆ ನನಗೆ ಆಗಿಲ್ಲ; ಅವರೊಬ್ಬ ಸಾರ್ವಜನಿಕ ವ್ಯಕ್ತಿ ಮತ್ತು ಸಮಾಜದಲ್ಲಿ ಉನ್ನತ ಘನತೆ, ಗೌರವ ಹೊಂದಿರುವ ವ್ಯಕ್ತಿ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next