Advertisement
ರಾಹುಲ್ ಗಾಂಧಿ ತಮ್ಮ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇದರ ಜತೆಗೆ ತಾನು ಬೆಳೆದ ಬೆಳೆಯನ್ನು ಮಾರಲು 4 ದಿನಗಳ ಕಾಲ ಬಿಸಿಲಲ್ಲಿ ನಿಂತು ಅಸುನೀಗಿದ ಮುಸ್ಲಿಂ ರೈತನ ನಿವಾಸಕ್ಕೂ ಭೇಟಿ ನೀಡಲಿದ್ದಾರೆ.
Related Articles
Advertisement
7,8ಕ್ಕೆ ಸಮಾಲೋಚನೆ: ಲೋಕಸಭೆ, ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಸಲುವಾಗಿ ಕಾನೂನು ಆಯೋಗ ಜು.7,8ರಂದು ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಲಿದೆ. ಹೊಸದಿಲ್ಲಿಯಲ್ಲಿ ಈ ಸಭೆ ನಡೆಯಲಿದ್ದು, ಮಾನ್ಯತೆ ಪಡೆದ 7 ರಾಷ್ಟ್ರೀಯ ಪಕ್ಷಗಳು ಮತ್ತು 59 ಪ್ರಾದೇಶಿಕ ಪಕ್ಷಗಳ ನಾಯಕರು ಭಾಗವಹಿ ಸಲಿದ್ದಾರೆ. ಈ ಹಿಂದೆ ಕೂಡ ಕಾನೂನು ಆಯೋಗ ಇದೇ ಮಾದರಿಯ ಸಭೆ ನಡೆಸಿದ್ದರೂ, ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ.
ಚುನಾವಣೆಗೆ ಮುನ್ನ ಯಾವ ಮೈತ್ರಿಯೂ ಇಲ್ಲ: ಯೆಚೂರಿಕಳೆದ 3-4 ದಶಕಗಳ ನನ್ನ ರಾಜಕೀಯ ಅನುಭವದ ಪ್ರಕಾರ ಹೇಳುವುದಾದರೆ, ಚುನಾವಣೆಗೆ ಮುನ್ನ ಯಾವುದೇ ಮೈತ್ರಿ ಇರುವುದಿಲ್ಲ. ತೃತೀಯ ರಂಗವೋ, ಇನ್ನೊಂದು ರಂಗವೋ ರಚನೆಯಾಗುವುದಿದ್ದರೂ, ಅದು ಚುನಾವಣೆಯ ನಂತರವೇ ರಚನೆಯಾಗುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ. ಸಿಎನ್ಎನ್ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದು, ಲೋಕ ಸಭೆ ಚುನಾವಣೆಗೆ ಮುನ್ನ ತೃತೀಯ ರಂಗ ರಚನೆಯಾಗುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಇದೇ ವೇಳೆ, ಎಸ್ಪಿ-ಬಿಎಸ್ಪಿ ಒಂದಾಗಿದ್ದು ಚುನಾವಣಾ ಮೈತ್ರಿ. ಆದರೆ ಪಿಣರಾಯಿ ವಿಜಯನ್ ಮತ್ತು ಮಮತಾ ಬ್ಯಾನರ್ಜಿ ಒಂದೇ ವೇದಿಕೆಯಡಿ ಕಾಣಿಸಿದ್ದು ಚುನಾವಣಾ ಮೈತ್ರಿಯಲ್ಲ. ಅದು ಕೇಂದ್ರ-ರಾಜ್ಯ ಸಂಬಂಧಕ್ಕೆ ಸಂಬಂಧಿ ಸಿದ ವಿಷಯವಾಗಿತ್ತು. ದೇಶದ ಸಂವಿಧಾನದ ರಕ್ಷಣೆಗಾಗಿ ನಾವು ಅಂದು ಒಂದಾದೆವು ಎನ್ನುವ ಮೂಲಕ ಟಿಎಂಸಿ ಜತೆ ಮೈತ್ರಿಯಿಲ್ಲ ಎಂಬುದನ್ನು ಪರೋಕ್ಷವಾಗಿ ಯೆಚೂರಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಬಿಹಾರದಲ್ಲಿ ಮಹಾಮೈತ್ರಿ ಯೊಂದಿಗೆ ನಮಗೇನೂ ಕೆಲಸವಿಲ್ಲ ಎಂದು ಸಿಪಿಐ ತಿಳಿಸಿದೆ. ಅಲ್ಲದೆ, ಆರ್ಜೆಡಿ ಹಾಗೂ ಕಾಂಗ್ರೆಸ್ನ ಲೆಫ್ಟ್ ಡೆಮಾಕ್ರಾಟಿಕ್ ಸೆಕ್ಯುಲರ್ ಫ್ರಂಡ್(ಎಲ್ಡಿಎಸ್ಎಫ್)ನ ಅಡಿ ನಮ್ಮ ಪಕ್ಷ ಹೊಂದಾಣಿಕೆ ಮಾಡಿಕೊಂಡು, 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದೆ.