Advertisement

Udupi: ಕರಿಮಣಿ ಮಾಲಕರು ಪತ್ತೆ! ಪ್ರಾಮಾಣಿಕತೆ ಮೆರೆದ ಬಸ್‌ ಸಿಬಂದಿ

08:33 PM Feb 22, 2024 | Team Udayavani |

ಉಡುಪಿ: ಬಸ್‌ನಲ್ಲಿ ಕಳೆದುಕೊಂಡ ಲಕ್ಷಾಂತರ ರೂ.ಬೆಲೆಬಾಳುವ ವಜ್ರದ ಕರಿಮಣಿ ಸರವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಬಸ್‌ ಚಾಲಕ ಹಾಗೂ ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಗುರುವಾರ ಮಣಿಪಾಲದಿಂದ ಮಂಗಳೂರಿಗೆ ಬೆಳಗ್ಗೆ ಮೊದಲ ಟ್ರಿಪ್‌ ಹೋಗುತ್ತಿದ್ದ ರೇಷ್ಮಾ ಹೆಸರಿನ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದ ಮಣಿಪಾಲ ಮೂಲದ ದಂಪತಿಗೆ ಮಂಗಳೂರಿಗೆ ತಲುಪಿದಾಗ ಕರಿಮಣಿ ನಾಪತ್ತೆಯಾಗಿರುವುದು ತಿಳಿದುಬಂದು. ಕೂಡಲೇ ಅವರು ಟಿಕೆಟ್‌ನಲ್ಲಿದ್ದ ರೇಷ್ಮಾ ಬಸ್‌ನ ಸಂಖ್ಯೆಗೆ ಕರೆಮಾಡಿ ವಿಚಾರ ತಿಳಿಸುತ್ತಾರೆ. ಕರಿಮಣಿಯನ್ನು ಯಾರೋ ಮರೆತು ಬಸ್‌ನಲ್ಲಿ ಬಿಟ್ಟುಹೋಗಿದ್ದಾರೆ ಎಂದು ತಿಳಿದ ಬಸ್‌ ಸಿಬಂದಿ ಅದನ್ನು ಜೋಪಾನವಾಗಿ ತೆಗೆದಿರಿಸಿದ್ದಾರೆ. ಕರಿಮಣಿ ಮಾಲಕರು ಕರೆಮಾಡಿದಾಗ ಸೂಕ್ತ ದಾಖಲೆ ನೀಡಿದರೆ ವಾಪಾಸು ನೀಡುವುದಾಗಿ ತಿಳಿಸಿ ಮಣಿಪಾಲಕ್ಕೆ ಬರುವಂತೆ ಸೂಚಿಸಿದ್ದಾರೆ. ಅದರಂತೆ ಮಂಗಳೂರಿನಿಂದ ಮಣಿಪಾಲಕ್ಕೆ ಆಗಮಿಸಿದ ಕರಿಮಣಿ ಮಾಲಕರಿಗೆ ಬಸ್‌ ಚಾಲಕ ಪುರಂದರ, ನಿರ್ವಾಹಕ ಆಸಿಫ್ ಅವರು ಬಸ್‌ನಲ್ಲಿ ದೊರೆತ ನಾಲ್ಕೂವರೆ ಲ.ರೂ.ಬೆಲೆ ಬಾಳುವ ವಜ್ರದ ಕರಿಮಣಿಸರವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದರು.

 

 

Advertisement

Udayavani is now on Telegram. Click here to join our channel and stay updated with the latest news.

Next