Advertisement

ಎಐಎಡಿಎಂಕೆ ಕಚೇರಿ ಲೂಟಿ ಮಾಡಲಾಗಿದೆ: ಪನ್ನೀರ್ ಸೆಲ್ವಂ ವಿರುದ್ಧ ದೂರು ದಾಖಲು

07:07 PM Jul 23, 2022 | Team Udayavani |

ಚೆನ್ನೈ : ಜುಲೈ 11 ರಂದು ಪಕ್ಷದ ಉಚ್ಛಾಟಿತ ನಾಯಕ ಓ. ಪನ್ನೀರ್ ಸೆಲ್ವಂ (ಒಪಿಎಸ್) ಅವರ ಬೆಂಬಲಿಗರು ಪಕ್ಷದ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ ಮತ್ತು ದಾಖಲೆಗಳು ಮತ್ತು ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದ್ದಾರೆ ಎಂದು ತಮಿಳುನಾಡಿನ ಪ್ರತಿಪಕ್ಷ ಎಐಎಡಿಎಂಕೆ ಶನಿವಾರ  ದೂರು ದಾಖಲಿಸಿದೆ.

Advertisement

ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಿ.ವಿ.  ಷಣ್ಮುಗಂ ಅವರು ಪನ್ನೀರ್ ಸೆಲ್ವಂ ಮತ್ತು ಬೆಂಬಲಿಗರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಎಐಎಡಿಎಂಕೆ ಕಚೇರಿಗೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರು ದಾಖಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಷಣ್ಮುಗಂ, ಪನ್ನೀರ್ ಸೆಲ್ವಂ ಅವರ ಬೆಂಬಲಿಗರು ಪಕ್ಷದ ಕಚೇರಿಗೆ ನುಗ್ಗಿ ದಾಖಲೆಗಳನ್ನು ಲೂಟಿ ಮಾಡಿದ್ದಾರೆ. ಎಲ್ಲಾ ಕೊಠಡಿಗಳನ್ನು ಒಡೆದು ಅನೇಕ ವಸ್ತುಗಳನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

ಕಚೇರಿಯ ಕಟ್ಟಡವು ಪಕ್ಷದ ಸಂಸ್ಥಾಪಕ, ದಿವಂಗತ ಎಂಜಿ ರಾಮಚಂದ್ರನ್ ಅವರ ಪತ್ನಿ ಜಾನಕಿಯವರದ್ದಾಗಿದ್ದು, ಅವರು ಅದನ್ನು ಎಐಎಡಿಎಂಕೆಗೆ ನೀಡಿದ್ದಾರೆ ಎಂದು ಷಣ್ಮುಗಂ ಹೇಳಿದರು.

ಪನ್ನೀರಸೆಲ್ವಂ ಅವರ ವಾಹನದಲ್ಲಿ ಕೊಯಮತ್ತೂರು ಮತ್ತು ಮಧುರೈನಲ್ಲಿರುವ ಕಚೇರಿ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next