Advertisement

ನಾಪತ್ತೆಯಾಗಿದ್ದ HDFC ಉಪಾಧ್ಯಕ್ಷ ಕೊಲೆ,ಮೃತದೇಹ ಪತ್ತೆ, ಓರ್ವ ಸೆರೆ

11:44 AM Sep 10, 2018 | Team Udayavani |

ಮುಂಬಯಿ : ಕಳೆದ ವಾರ ನಾಪತ್ತೆಯಾಗಿದ್ದ ಎಚ್‌ ಡಿ ಎಫ್ ಸಿ ಬ್ಯಾಂಕ್‌ ಉಪಾಧ್ಯಕ್ಷ ಸಿದ್ಧಾರ್ಥ ಸಾಂಘವಿ ಅವರ ಮೃತ ದೇಹ ನಿನ್ನೆ ಭಾನುವಾರ ಪತ್ತೆಯಾಗಿದೆ. 

Advertisement

ಘಟನೆ ಸಂಬಂಧ ಪೊಲೀಸರು 20ರ ಹರೆಯದ ಸರ್‌ಫ‌ರಾಜ್‌ ಶೇಖ್‌ ಎಂಬಾತನನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. 

39ರ ಹರೆಯದ ಸಾಂಘವಿ ಅವರು ಸೆ.5ರ ಗುರುವಾರದಂದು ಇಲ್ಲಿನ ಕಮಲಾ ಮಿಲ್ಸ್‌ ಕಚೇರಿಯಿಂದ ನಾಪತ್ತೆಯಾಗಿದ್ದರು. ಮರು ದಿನ ಪೊಲೀಸರು ಸಾಂಘವಿ ಅವರ ಪರಿತ್ಯಕ್ತ ಕಾರನ್ನು ನವೀ ಮುಂಬಯಿಯ  ಕೋಪರ್‌ ಖರ್‌ನೆ ಪ್ರದೇಶದಲ್ಲಿ ಪತ್ತೆ ಹಚ್ಚಿದ್ದರು.

ಸಾಂಘವಿ ಅವರ ನಾಪತ್ತೆ ಪ್ರಕರಣವು ಎನ್‌ಎಂ ಜೋಷಿ ಮಾರ್ಗ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. 

ಬಂಧಿತ ಶೇಖ್‌ ತಾನು ಸಾಂಘವಿ ಅವರನ್ನು ಬುಧವಾರ  ಕೊಂದಿದ್ದುದಾಗಿ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

Advertisement

ಎಚ್‌ ಡಿ ಎಫ್ ಸಿ ಉಪಾಧ್ಯಕ್ಷ ಸಾಂಘವಿ ಅವರ ಕೊಲೆಯ ನಾಲ್ವರು ಬಾಡಿಗೆ ಹಂತಕರಲ್ಲಿ ಶೇಖ ಒಬ್ಬನಾಗಿದ್ದಾನೆ ಎಂದು ತಿಳಿದುಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next