Advertisement

ನಾಪತ್ತೆಯಾಗಿದ್ದ ಆನೆ ಮರಿ ವಾಣಿ ವಿಲಾಸ ಸಾಗರ ಹಿನ್ನೀರಿನಲ್ಲಿ ಪತ್ತೆ

11:21 AM Feb 18, 2020 | keerthan |

ಚಿತ್ರದುರ್ಗ: ಮೂರು ದಿನದಿಂದ ನಾಪತ್ತೆ ಆಗಿದ್ದ ಮರಿ ಆನೆ ಇಂದು ವಾಣಿ ವಿಲಾಸ ಸಾಗರದ ಹಿನ್ನೀರಿನಲ್ಲಿ ಪತ್ತೆಯಾಗಿದೆ.

Advertisement

ದಾಂಡೇಲಿ ಅರಣ್ಯ ಪ್ರದೇಶದಿಂದ ಬಂದಿದ್ದ ಆನೆ, ಹೊಳಲ್ಕೆರೆ ತಾಲೂಕಿನ ನೀರ್ಥಡಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಆನಂತರ ಚಿತ್ರದುರ್ಗ ತಾಲೂಕು ಪ್ರವೇಶಿಸಿದ್ದ ಚಿಟ್ಟಾನೆ ಮೂರು ದಿನ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಕ್ಯಾಮರಾ ಬಳಸಿ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ, ಹೆಜ್ಜೆ ಗುರುತಿನ ಆಧಾರದಲ್ಲಿ ವಾಣಿ ವಿಲಾಸ ಸಾಗರದ ಕಡೆ ಹೋಗಿರಬಹುದು ಎಂದು ಅಂದಾಜಿಸಲಾಗಿತ್ತು.

ಮಂಗಳವಾರ ಬೆಳಗಿನ ಕಾರ್ಯಾಚರಣೆ ವೇಳೆ ವಾಣಿ ವಿಲಾಸದ ಹಿನ್ನೀರಿನಲ್ಲಿ ಕಂಡು ಬಂದಿದ್ದು, ಕಾರಿಡಾರ್ ಮೂಲಕ ಮರಳಿಸುವ ಕಾರ್ಯ ಇಂದಿನಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next