Advertisement

ಬ್ರಹ್ಮಾವರ: ತೀರ್ಥಹಳ್ಳಿಗೆಂದು ತೆರಳಿದ ಯುವತಿ ನಾಪತ್ತೆ

08:48 PM Dec 10, 2022 | Team Udayavani |

ಬ್ರಹ್ಮಾವರ: ತೀರ್ಥಹಳ್ಳಿಯ ತಾಯಿ ಮನೆಗೆ ಹೋಗಿ ಬರುವುದಾಗಿ ಆರೂರಿನಿಂದ ತೆರಳಿದ ರಂಜಿತಾ (23) ನಾಪತ್ತೆಯಾಗಿದ್ದಾರೆ.

Advertisement

ಶಿವಪುರದ ಅಜ್ಜಿ ಮನೆಯಲ್ಲಿ ವಾಸವಿದ್ದು ಉಡುಪಿಯಲ್ಲಿ ಲ್ಯಾಬ್‌ ಟೆಕ್ನಿಷಿಯನ್‌ ಓದಿದ್ದ ಅವರು ತೀರ್ಥಹಳ್ಳಿಯ ತನ್ನ ಮನೆಯಲ್ಲಿದ್ದರು. ಉದ್ಯೋಗ ಹುಡುಕುವ ಉದ್ದೇಶದಿಂದ ಎರಡು ವಾರದ ಹಿಂದೆ ಆರೂರಿನ ಸಂಬಂಧಿಕರ ಮನೆಗೆ ಬಂದಿದ್ದರು.

ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸದ ಬಗ್ಗೆ ಮಾತನಾಡಿ ಡಿ.11ರಿಂದ ಹೋಗುವುದಾಗಿ ಹೇಳಿದ್ದರು. ಡಿ. 9ರಂದು ತಾಯಿಮನೆ ತೀರ್ಥಹಳ್ಳಿಗೆ ಹೋಗಿ ಬರುವುದಾಗಿ ಕುಂಜಾಲು ಕ್ರಾಸ್‌ನಲ್ಲಿ ಬಸ್‌ ಹತ್ತಿದವರು ತೀರ್ಥಹಳ್ಳಿಗೆ ಹೋಗದೆ ಫೋನ್‌ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಗಿದು ಆತ್ಮಹತ್ಯೆ
ಬ್ರಹ್ಮಾವರ: ಮಟಪಾಡಿ ಗ್ರಾಮದ ಗೋಪಾಲಕೃಷ್ಣ ನಾಯರಿ (52) ಶುಕ್ರವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಸುಮಾರು 10 ವರ್ಷಗಳ ಹಿಂದೆ ಪತ್ನಿಯನ್ನು ಬಿಟ್ಟು ತಾಯಿಯೊಂದಿಗೆ ವಾಸವಾಗಿದ್ದರು. ತಾಯಿ ಬೆಂಗಳೂರಿಗೆ ತೆರಳಿದ್ದ ಸಂದರ್ಭ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next