Advertisement

ದೇವಸ್ಥಾನಕ್ಕೆ ಹೋದವರು ನಾಪತ್ತೆ

07:57 PM Jun 19, 2022 | Team Udayavani |

ಪುತ್ತೂರು: ತಮಿಳುನಾಡಿನ ಧೇಣಿ ಜಿಲ್ಲೆಯ ಬೋಡಿನಾಯಕನೂರಿನಲ್ಲಿ ಏಲಕ್ಕಿ ವ್ಯಾಪಾರ ಮಾಡಿಕೊಂಡಿದ್ದು ಪುತ್ತೂರಿನ ಸಹೋದರನ ಮನೆಗೆ ಬಂದಿದ್ದ ಸಹೋದರನೋರ್ವ ಜೂ. 4ರಂದು ದೇವಸ್ಥಾಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆಂದು ಸಹೋದರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement

ಚಿಕ್ಕಪುತ್ತೂರು ಮಡಿವಾಳಕಟ್ಟೆ ನಿವಾಸಿ ಎಂ. ಕಣ್ಣನ್‌ ಅವರ ಸಹೋದರ, ತಮಿಳುನಾಡಿನಲ್ಲಿ ಏಲಕ್ಕಿ ವ್ಯಾಪಾರ ಮಾಡುತ್ತಿರುವ ಎಂ. ಲೋಕನಾಥನ್‌ ನಾಪತ್ತೆಯಾದವರು. ಲೋಕನಾಥ್‌ ಅವರು ಜೂ. 2 ರಂದು ತಮಿಳುನಾಡಿನಿಂದ ಪತ್ನಿ ಜ್ಯೋತಿ ಮತ್ತು ಪುತ್ರಿಯೊಂದಿಗೆ ಪುತ್ತೂರಿಗೆ ಬಂದು ಜೂ. 4ರಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೋದವರು ನಾಪತ್ತೆಯಾಗಿದ್ದಾರೆ. ಸಹೋದರ ಕಣ್ಣನ್‌ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next