Advertisement

ನಾಪತ್ತೆಯಾಗಿದ್ದ ಪೆರುವಾಜೆ ಗ್ರಾಮದ ಬಾಲಕ ಪತ್ತೆ

03:00 PM Feb 11, 2020 | keerthan |

ಬೆಳ್ಳಾರೆ: ಮನೆಯ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಬೆಳಿಗ್ಗೆ ನಾಪತ್ತೆಯಾಗಿದ್ದ ಬಾಲಕ ಪುತ್ತೂರು ಬಸ್ಸು ನಿಲ್ದಾಣದಲ್ಲಿ‌ ಪತ್ತೆಯಾಗಿದ್ದಾನೆ.

Advertisement

ಬೆಳ್ಳಾರೆ ಸನಿಹದ ಪೆರುವಾಜೆ ಗ್ರಾಮದ ಕುಂಡಡ್ಕ ನಿವಾಸಿ ಕುಂಞ ಅವರ ಪುತ್ರ, ಚೆನ್ನಾವರ ಕಿ.ಪ್ರಾ.ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ (11) ಪತ್ತೆಯಾದ ಬಾಲಕ.

ಬೆಳಗ್ಗೆ 7 ಗಂಟೆ ಹೊತ್ತಿಗೆ ತಾಯಿಯ ಬಳಿ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ. ತುಂಬಾ ಹೊತ್ತಾದರೂ ಬಾರದಿರುವ ಕಾರಣ ಮನೆ ಮಂದಿ ಹುಡುಕಾಟ ನಡೆಸಿದ್ದಾರೆ. ಆದರೆ ಆತ ಪತ್ತೆಯಾಗಿರಲಿಲ್ಲ. ಕೊನೆಗೆ ಆತ ಬೆಳ್ಳಾರೆ- ಸವಣೂರು-ಪುತ್ತೂರು ಬಸ್ ನಲ್ಲಿ ತೆರಳಿರುವ ಮಾಹಿತಿ ದೊರೆತು, ಪುತ್ತೂರು ಬಸ್ ನಿಲ್ದಾಣದಲ್ಲಿ ಹುಡುಕಾಟ ನಡೆಸಲಾಯಿತು. ಅಲ್ಲಿ ಆತ ಪತ್ತೆಯಾಗಿದ್ದಾನೆ. ಬೆಳ್ಳಾರೆ ಪೊಲೀಸ್ ಠಾಣಾ ಸಿಬಂದಿಗಳು ಹಾಗೂ ಸಾರ್ವಜನಿಕರು ಹುಡುಕಾಟದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next