Advertisement

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

09:18 PM Apr 29, 2024 | Team Udayavani |

ಚಿಕ್ಕಮಗಳೂರು: ಪ್ರೀತಿಸಿ ವಿವಾಹವಾಗಿ ದೂರವಾಗಿದ್ದ ಪತ್ನಿಯನ್ನು ತವರು ಮನೆಗೆ ಜಾತ್ರೆಗೆ ಬಂದಿದ್ದ ವೇಳೆ ಪತಿಯೇ ಮಚ್ಚಿನಿಂದ ಕೊಚ್ಚಿ ಕೊಲೆ ಘಟನೆ ಜಿಲ್ಲೆಯ ತರೀಕೆರೆ ತಾಲೂಕು ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.

Advertisement

ತರೀಕೆರೆ ತಾಲೂಕು ಕರಕುಚ್ಚಿ ಗ್ರಾಮದ ಮೇಘನಾ ಬರ್ಬರವಾಗಿ ಹತ್ಯೆಗೀಡಾದವಳು. ಭದ್ರಾನದಿಗೆ ಬಟ್ಟೆ ಒಗೆಯಲು ತೆರಳಿದ್ದ ವೇಳೆ ಹಿಂಬಾಲಿಸಿ ದ ಶರಣ್ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮೇಘನಾ ಹಾಗೂ ಅದೇ ಗ್ರಾಮದ ಶರಣ್ ಪ್ರೀತಿಸುತ್ತಿದ್ದರು. ಆ ವೇಳೆಯಲ್ಲಿ ಮೇಘನಾ ಅಪ್ರಾಪ್ತೆಯಾಗಿದ್ದು ಫೋಕ್ಸೋ ಪ್ರಕರಣ ದಾಖಲಾಗಿತ್ತು. ನಂತರ ಎರಡು ಮನೆಯರು ಸೇರಿ ಮದುವೆ ಮಾಡಿದ್ದರು.

ವಿವಾಹವಾದ ನಂತರ ನಿತ್ಯ ಕಿರುಕುಳ ನೀಡಲು ಆರಂಭಿಸಿದ್ದ, ಇದರಿಂದ ಬೇಸತ್ತ ಮೇಘನಾ ತವರು ಮನೆಗೆ ಸೇರಿದ್ದಳು. ಮೇಘನಾ ಮನೆಯವರು ಆಕೆಯ ಅಜ್ಜಿಯ ಮನೆ ಬಿಆರ್‌ಪಿಗೆ ಕಳಿಸಿದ್ದರು. ಕರಕುಚ್ಚಿ ಮುಳಕಟ್ಟಮ್ಮ ಜಾತ್ರೆ ಹಿನ್ನಲೆ ಮೇಘನಾ ಭಾನುವಾರ ತವರು ಮನೆ ಕರಕುಚ್ಚಿಗೆ ಬಂದಿದ್ದಳು. ಸೋಮವಾರ ಬಟ್ಟೆ ತೊಳೆಯಲು ಭದ್ರಾ ನದಿಗೆ ತೆರಳಿದ್ದ ವೇಳೆ ಶರಣ್ ಹಿಂಬಾಲಿಸಿ ಮೇಘನಾಗೆ ಮಚ್ಚಿನಿಂದ ಕತ್ತು ಸೀಳಿ ಬರ್ಬರ ವಾಗಿ ಹತ್ಯೆ ಮಾಡಿದ್ದಾನೆ.

ಮೇಘನಾ ಮುಳಕಟ್ಟಮ್ಮ ಜಾತ್ರೆಗೆ ಬಂದಿದ್ದ ವೇಳೆ ಹೊಂಚು ಹಾಕಿ ಪತ್ನಿಯನ್ನು ಮಚ್ಚಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಸದ್ಯ ಆರೋಪಿ ಶರಣ್ ತಲೆಮರೆಸಿಕೊಂಡಿದ್ದು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next