Advertisement

‘ಟಿಪ್ಪು ಎಕ್ಸ್‌ಪ್ರೆಸ್‌’ಹೆಸರು ಬದಲಾಯಿಸಿದ ರೈಲ್ವೆ ಸಚಿವಾಲಯ

07:57 PM Oct 07, 2022 | Team Udayavani |

ಮೈಸೂರು : ಕೇಂದ್ರ ರೈಲ್ವೆ ಸಚಿವಾಲಯ ರಾಜ್ಯದ ಎರಡು ರೈಲುಗಳಿಗೆ ಶುಕ್ರವಾರ ಮರುನಾಮಕರಣ ಮಾಡಿದ್ದು, ಮೈಸೂರು-ಬೆಂಗಳೂರು ನಡುವಿನ ‘ಟಿಪ್ಪು ಎಕ್ಸ್‌ಪ್ರೆಸ್‌’ ರೈಲಿನ ಹೆಸರು ಬದಲಾಯಿಸಿ ಬದಲು ‘ಒಡೆಯರ್ ಎಕ್ಸ್‌ಪ್ರೆಸ್‌’ ಎಂದು ಮರು ನಾಮಕರಣ ಮಾಡಲಾಗಿದೆ. ಮೈಸೂರು-ತಾಳಗುಪ್ಪ ರೈಲಿಗೆ ‘ಕುವೆಂಪು ಎಕ್ಸ್‌ಪ್ರೆಸ್‌’ ಎಂಬ ಹೆಸರಿಡಲಾಗಿದೆ.

Advertisement

ಇದನ್ನೂ ಓದಿ : ವಂದೇ ಭಾರತ್ ಗೆ ಜಾನುವಾರು ಸಮಸ್ಯೆ: ಮತ್ತೆ ಢಿಕ್ಕಿ, ಡೆಂಟ್ !

ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಶುಕ್ರವಾರದ ಶುಭ ಸುದ್ದಿ! ಎಂದು ಟ್ವೀಟ್ ಮಾಡಿದ್ದು, ”ಇನ್ನು ಮುಂದೆ ಟಿಪ್ಪು ಎಕ್ಸ್‌ಪ್ರೆಸ್‌ ಬದಲು “ಒಡೆಯರ್ ಎಕ್ಸ್‌ಪ್ರೆಸ್‌ “ ನಿಮಗೆ ಸೇವೆ ನೀಡಲಿದೆ!! ಮೈಸೂರು-ತಾಳಗುಪ್ಪ ರೈಲು “ಕುವೆಂಪು ಎಕ್ಸ್‌ಪ್ರೆಸ್‌” ಆಗಲಿದೆ!!! ಥಾಂಕ್ಯೂ ಅಶ್ವಿನಿ ವೈಷ್ಣವ್ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ ಸರ್!,ಕುವೆಂಪು ಹೆಸರು ಸೂಚಿಸಿದ ಸ್ನೇಹಿತರಾದ ಡಿಪಿ ಸತೀಶ್ ರಿಗೆ ಧನ್ಯವಾದಗಳು! ಸದಾ ಆಶೀರ್ವದಿಸುವ ನಿಮಗೂ ಥಾಂಕ್ಯೂ” ಎಂದು ಟ್ವೀಟ್ ಮಾಡಿದ್ದಾರೆ.

ಪ್ರತಾಪ್ ಸಿಂಹ ಅವರು ಹೆಸರನ್ನು ಬದಲಾಯಿಸುವಂತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next