Advertisement

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ; ಅಂಥ ಸಂಭವವೂ ಇಲ್ಲ- ಉಮೇಶ್ ಕತ್ತಿ

07:21 PM Apr 24, 2022 | Team Udayavani |

ವಿಜಯಪುರ: ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ. ಅಂಥ ಸಂಭವವೂ ಇಲ್ಲ. ಹೀಗಾಗಿ ಅವರು ಏನೇನೋ ಮಾತನಾಡುತ್ತಾರೆ ಎಂದು ಅರಣ್ಯ ಖಾತೆ ಹೊಂದಿರುವ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಹೇಳಿದರು.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬುಲ್ಡೋಜರ್ ವಿಷಯವಾಗಿ ಸಿದ್ಧರಾಮ್ಯಯ ಅವರು ಮಾತನಾಡಿರುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಡಿ ಎಂದ ಸಚಿವ ಉಮೇಶ್ ಕತ್ತಿ, ಅಕ್ಷಯ ತೃತೀಯ ಹಬ್ಬದ ಸಂದರ್ಭದಲ್ಲಿ ಹಿಂದೂಗಳು ಮುಸ್ಲಿಂ ಅಂಗಡಿಗಳಲ್ಲಿ ಚಿನ್ನ ಖರೀದಿಸಬೇಡಿ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ನೀಡಿರುವ ಹೇಳಿಕೆಗೂ ಮಹತ್ವ ಕೊಡುವುದು ಬೇಡ ಎಂದರು.

ಹಿಂದೂ-ಮುಸ್ಲಿಂ ಸಮುದಾಯಗಳ ಮಧ್ಯೆ ಜಗಳ ಹಚ್ಚುವ ಇಂಥ ಹೇಳಿಕೆಗೆ ಯಾರೂ ಮಹತ್ವ ಕೊಡಬೇಡಿ. ಅಕ್ಷಯ ತೃತೀಯ ದಿನ ಚಿನ್ನದ ವ್ಯಾಆರದ ಹೆಸರಿನಲ್ಲಿ ಹಿಂದೂ-ಮುಸ್ಲೀಂ ಸಮುದಾಯಗಳ ಜಗಳ ಹಚ್ಚುವ ಕೆಲಸ ನಡೆಯುತ್ತಿದೆ. ಇಂಥ ವಿಷಯಗಳಿಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದರು.

ರಾಜ್ಯದ ಮಂತ್ರಿಮಂಡಳ ವಿಸ್ತರಣೆ ಆಗುವುದ ಖಚಿತ. ಆಗ ವಿಜಯಪುರ ಜಿಲ್ಲೆಗೆ ಆದ್ಯತೆ ಸಿಗುವುದು ಖಚಿತ ಎಂದು ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next