Advertisement

ಅಥಣಿಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಬಗ್ಗೆ ಲಕ್ಷ್ಮಣ ಸವದಿಯೇ ಉತ್ತರಿಸಲಿ: ಸತೀಶ

09:46 PM Jun 08, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಪ್ರತಿನಿಧಿಸಿರುವ ಕ್ಷೇತ್ರದಲ್ಲಾಗಿರುವ ಹಿನ್ನಡೆ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ಅಸಮಾಧಾನ ಮುಂದುವರಿದಿದ್ದು, “ಅಲ್ಲಿ (ಅಥಣಿಯಲ್ಲಿ) ಅವರಿಂದ ಕಡಿಮೆಯಾಯ್ತೋ ಅಥವಾ ಕಾರ್ಯಕರ್ತರಿಂದ ಹಿನ್ನಡೆಯಾಯ್ತೋ ಇದಕ್ಕೆ ಅವರೇ (ಲಕ್ಷ್ಮಣ ಸವದಿ) ಉತ್ತರಿಸಬೇಕು’ ಎಂದು ತೀಕ್ಷ್ಣವಾಗಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಮುನ್ನಡೆ ಸಿಕ್ಕಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿಯಲ್ಲಿ 70 ಸಾವಿರ ಲೀಡ್‌ ಬಂದಿತ್ತು. ಅಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯಾಗಿದೆ. ಚುನಾವಣೆಗೆ ಸವದಿ ಪಾತ್ರ ಕಡಿಮೆ ಇತ್ತು. ಇದರಿಂದ ಒಳೇಟು ಬಿದ್ದಿದೆ ಅಂತಾ ಅನಿಸುತ್ತಿದೆ. ಅವರಿಂದ ಕಡಿಮೆಯಾಯ್ತೋ ಇಲ್ಲ ಕಾರ್ಯಕರ್ತರಿಂದಲೇ ಕಡಿಮೆಯಾಯ್ತೋ ಎಂಬುದನ್ನು ಸ್ವತಃ ಅವರೇ ಉತ್ತರ ಕೊಡಬೇಕು’ ಎಂದು ತಿಳಿಸಿದರು. ಬಿಜೆಪಿ, ಜೆಡಿಎಸ್‌ ಮೈತ್ರಿ, ಜಾತಿ ಸಮೀಕರಣದಿಂದಾಗಿ ಕಡಿಮೆ ಸ್ಥಾನ ಬಂದಿದೆ. ಇದರ ಬಗ್ಗೆ ನಾವು ಚರ್ಚಿಸಬೇಕಿದೆ. ಮುಂದೆ ಏನು ಮಾಡಬೇಕು ಎಂದು ಸಮಾಲೋಚನೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next