Advertisement

ಸಿದ್ದರಾಮೋತ್ಸವ ಚುನಾವಣಾ ದಿಕ್ಸೂಚಿ ಅಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

08:05 PM Aug 07, 2022 | Team Udayavani |

ಬೆಂಗಳೂರು: “ಸಿದ್ದರಾಮೋತ್ಸವ ಒಂದು ರಾಜಕೀಯ ಉತ್ಸವ ಅಷ್ಟೇ. ಅದರಿಂದ ಸರ್ಕಾರ ರಚನೆ ಮಾಡಲಾಗದು. ಆ ಉತ್ಸವ ಚುನಾವಣೆ ದಿಕ್ಸೂಚಿಯೂ ಆಗದು’ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹುಟ್ಟಿದ ದಿನಾಂಕವೇ ನೆನಪಿಲ್ಲ ಎಂದು ಸ್ವತಃ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲೇ ಹೇಳಿದ್ದರು. ಆದರೆ, ಅವರಿಗೆ ಯಾವಾಗ 75 ವರ್ಷವಾಯಿತು ಎಂಬುದು ಜನರಿಗೆ ಗೊತ್ತಾಗುತ್ತಿದೆ. ಬಿಜೆಪಿಯಿಂದಲೂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದರು.

“ಹೊಸಬರು ಬಂದ್ರೆ ಒಳ್ಳೆ ಕೆಲಸ ಮಾಡ್ತಾರೆ’
ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಯಾವಾಗ ಬೇಕಾದರೂ ವಿಸ್ತರಣೆ ಮಾಡಬಹುದು ಅಥವಾ ಪುನಾರಚನೆಯೂ ಮಾಡಬಹುದು. ಅವಕಾಶ ಸಿಕ್ಕು ಹೊಸಬರು ಬಂದರೆ, ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಹರ್‌ ಘರ್‌ ತಿರಂಗಾ ಅಭಿಯಾನದಡಿ ಕೆಲವು ಕಡೆ ದೋಷಪೂರಿತ ಧ್ವಜಗಳು ಬರುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಯಾವುದೇ ಕಾರಣಕ್ಕೂ ದೋಷಪೂರಿತ ರಾಷ್ಟ್ರಧ್ವಜ ಹಾರಿಸಬಾರದು ಎಂದು ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next