Advertisement

ಒತ್ತುವರಿದಾರ ಹಣೆಪಟ್ಟಿ ಶೀಘ್ರ ದೂರು: ಸಚಿವ ಆರ್‌. ಅಶೋಕ್‌

12:03 AM May 16, 2022 | Team Udayavani |

ಮಡಿಕೇರಿ: ಪರಿಸರಕ್ಕೆ ಪೂರಕವಾಗಿ ಮತ್ತು ರಾಜ್ಯ, ರಾಷ್ಟ್ರದ ಆದಾಯವನ್ನು ಹೆಚ್ಚಿಸುವ ಬೆಳೆ ಬೆಳೆಯುವ ಬೆಳೆಗಾರರ ಮೇಲಿನ ಒತ್ತುವರಿದಾರ ಎನ್ನುವ ಹಣೆಪಟ್ಟಿಯನ್ನು ತೆಗೆಯುವ ಕಾರ್ಯವನ್ನು ಸರಕಾರ ಮಾಡಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ಗುರುವಾರ ನಡೆದ ಬೆಳೆೆಗಾರರ ಸಮಾವೇಶವನ್ನು ಉದ್ಘಾಟಿಸಿ, ಬೆಳೆೆಗಾರರ ಅಹವಾಲು ಆಲಿಸಿ ಅವರು ಮಾತನಾಡಿದರು.

ಕೊಡಗಿನಲ್ಲಿ ಹಲವಾರು ವರ್ಷ ಗಳಿಂದ ಸರಕಾರಿ ಪೈಸಾರಿ ಜಾಗವನ್ನು ಬಳಸಿ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆೆಯಲಾಗುತ್ತಿದೆ. ಇಂತಹ ಬೆಳೆೆಗಾರರ ಒತ್ತುವರಿ ಜಾಗವನ್ನು ನಿರ್ದಿಷ್ಟ ಅವಧಿಗೆ ಗುತ್ತಿಗೆ ಆಧಾರದಲ್ಲಿ ಅವರಿಗೆ ನೀಡುವ ನಿಟ್ಟಿ ನಲ್ಲಿ ಶೀಘ್ರವೇ ನಿರ್ಧಾರ ಕೈಗೊಂಡು ಕಾನೂನನ್ನು ರೂಪಿಸಲಾಗುತ್ತದೆಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next