Advertisement

ಉಗ್ರರು ರಾಹುಲ್‌ ಚಿಕ್ಕಪ್ಪನ ಮಕ್ಕಳೇ? ಸಚಿವ ಪ್ರಹ್ಲಾದ್‌ ಜೋಷಿ

12:35 AM Mar 08, 2023 | Team Udayavani |

ಬಳ್ಳಾರಿ: ಕೇಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಭಾಷಣ ಮಾಡಿರುವ ಎಐಸಿಸಿ ಮುಖಂಡ ರಾಹುಲ್‌ ಗಾಂಧಿ ಪುಲ್ವಾಮಾ ದಾಳಿಯನ್ನು ಕೇವಲ ಕಾರ್‌ ಬ್ಲಾಸ್ಟ್‌ ಎನ್ನುವ ಮೂಲಕ ಉಗ್ರವಾದಿಗಳ ಪರ ಹೇಳಿಕೆ ನೀಡಿದ್ದಾರೆಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಷಿ ಆರೋಪಿಸಿದರು.

Advertisement

ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ನಡೆದ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯನ್ನು ಪಾಕ್‌ ಕೃತ್ಯ ಎಂದು ನೇರವಾಗಿ ಹೇಳದ ರಾಹುಲ್‌ ಗಾಂಧಿ , ಅದೊಂದು ಕೇವಲ ಕಾರ್‌ ಬ್ಲಾಸ್ಟ್‌ ಎಂದು ಉಗ್ರವಾದಿಗಳ ಪರ ಹೇಳಿಕೆ ನೀಡಿದ್ದಾರೆ.

ಈ ಮೂಲಕ ಕಾಂಗ್ರೆಸ್‌ ಉಗ್ರವಾದಿಗಳ ಬೆಂಬಲಿಸುವ ಪಕ್ಷವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೇ ಉಗ್ರಗಾಮಿಗಳು ತಮ್ಮನ್ನು ಭೇಟಿಯಾಗಿದ್ದಾರೆ ಎಂದೂ ರಾಹುಲ್‌ ಗಾಂಧಿ  ಹೇಳಿಕೊಂಡಿದ್ದು, ಉಗ್ರಗಾಮಿಗಳು ಅವರ ಚಿಕ್ಕಪ್ಪನ ಮಕ್ಕಳೇ? ನಿಮ್ಮ ತಂದೆ, ಅಜ್ಜಿಯನ್ನು ಕೊಲೆ ಮಾಡಿರುವ ಉಗ್ರಗಾಮಿಗಳನ್ನು ನೀವು ಬೆಂಬಲಿಸುತ್ತೀರಾ? ಯಾರನ್ನಾದರೂ ಕೊಂದಾದರೂ ಅಧಿ ಕಾರಕ್ಕೆ ಬರುವ ಕಾಂಗ್ರೆಸ್‌ ಸುಳ್ಳು ಹೇಳುವುದನ್ನೇ ಪದ್ಧತಿಯನ್ನಾಗಿ ಅಳವಡಿಸಿಕೊಂಡಿದೆ.

ರಾಜಸ್ಥಾನದಲ್ಲಿ ಏನೆಲ್ಲಾ ನೀಡುವುದಾಗಿ ಜನರಿಗೆ ಭರವಸೆ ನೀಡಿದ್ದ ರಾಹುಲ್‌ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಈವರೆಗೂ ಮಾಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next